ಕೆ ಹರೀಶ್ ಗೌಡ ಅವರಿಗೆ ಶುಭ ಕೋರಿದಬಿ ಸುಬ್ರಹ್ಮಣ್ಯ

Spread the love

ಮೈಸೂರು: ಮೈಸೂರು ನಗರ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ ಅವರಿಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ ಸುಬ್ರಹ್ಮಣ್ಯ ಅವರು ಜನುಮದಿನದ ಶುಭ ಕೋರಿದರು.

ಭಾರೀ ಗಾತ್ರದ ಗುಲಾಬಿ ಹಾರ ಹಾಕಿ ಶಾಲು ಹೊದಿಸಿ ಹರೀಶ್ ಗೌಡರಿಗೆ ಜನುಮದಿನದ ಶುಭಕಾಮನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮಾದೇಗೌಡ, ಕೆಆರ್ ಮಾರ್ಕೆಟ್ ದಿನೇಶ್, ಎಚ್ ಡಿ ಕೋಟೆ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಆನಂದ್, ಪಿರಿಯಾಪಟ್ಟಣ ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಸುನಿಲ್, ಮುಖಂಡರುಗಳಾದ ಕಾಂಜೀಗೌಡ, ಮಂಜುನಾಥ್ ಮತ್ತಿತರರು ಹಾಜರಿದ್ದರು.