ಮೈಸೂರು: ಕರ್ನಾಟಕ ಸರ್ಕಾರದ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಎನ್ ಎಸ್ ರಾಮೇಗೌಡ ಅವರಿಗೆ ಮಯೂರ ಕನ್ನಡ ಯುವಕರ ಬಳಗ ಅಭಿನಂದಿಸಿದೆ.
2025ರ ಕರ್ನಾಟಕ ಸರ್ಕಾರ ನೀಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಿಂದ ಡಾ. ಎನ್ ಎಸ್ ರಾಮೇಗೌಡ ಅವರು ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಹಾಗೂ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯೂ ಆದ ಡಾಕ್ಟರ್ ಎನ್ ಎಸ್ ರಾಮೇಗೌಡ ಅವರನ್ನು ಕುವೆಂಪು ನಗರದ ಅವರ ನಿವಾಸದಲ್ಲಿ ಮಯೂರ ಕನ್ನಡ ಯುವಕರ ಬಳಗದವರು ಸನ್ಮಾನಿಸಿ,ಅಭಿನಂದಿಸಿದರು.
ಈ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾ. ಎಸ್ ಪಿ ಯೋಗಣ್ಣ, ಕೆಪಿಸಿಸಿ ಸದಸ್ಯರಾದ ಜಿ ಶ್ರೀನಾಥ್ ಬಾಬು,ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷರಾದ ಜಿ ರಾಘವೇಂದ್ರ, ಎಸ್ ಎನ್ ರಾಜೇಶ್, ಹರೀಶ್ ನಾಯ್ಡು, ಕಿಶೋರ್ ಕುಮಾರ್, ಶೇಖರ್, ಕಿರಣ್,ಜಿಬು ಮ್ಯಾಥ್ವಸ್ ಮತ್ತಿತರರು ಡಾಕ್ಟರ್ ಎನ್ ಎಸ್ ರಾಮೇಗೌಡ ಅವರಿಗೆ ಶುಭಕೋರಿದರು.

