ಮೈಸೂರು: ಈ ವರ್ಷ ಕಠಿಣವಾದ ದಿನಗಳನ್ನು ದೇಶ ಎದುರಿಸ ಬೇಕಾಗುತ್ತದೆ,ಪ್ರಾಕೃತಿಕ ಅನಾಹುತಗಳು ಸಂಭವಿಸುತ್ತದೆ ಹಾಗಾಗಿ ದೈವೀಕ ಭಾವನೆ ಹೊಂದಬೇಕು ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಜನತೆಗೆ ತಿಳಿಸಿದ್ದಾರೆ.
ಮಹಾಶಿವರಾತ್ರಿ ಪ್ರಯುಕ್ತ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಶಿವಲಿಂಗುವಿಗೆ ಅಭಿಷೇಕ ನೆರವೇರಿಸಿ ಜನತೆಗೆ ಆಶೀರ್ವಚನ ಶ್ರೀಗಳು ಆಶೀರ್ವಚನ ನೀಡಿದರು.

ಈ ವರ್ಷ ಪ್ರಾಕೃತಿಕ ವಿಕೋಪಗಳು,
ಯುದ್ಧಗಳು,ಅಪಮೃತ್ಯುಗಳು ಸಂಭವಿಸಲಿವೆ. ಹರಿ,ಶಿವನ ಕೃಪೆ ಇರುವುದರಿಂದ ಇವು ಕಡಿಮೆಯಾದರೂ ಜನತೆ ಕೂಡಾ ದೈವದ ಕಡೆ ಹೆಚ್ಚು ಗಮನ ಕೊಡಬೇಕು ಎಂದು ತಿಳಿಹೇಳಿದರು.
ಈ ಬಾರಿಯ ಕುಂಭ ಮೇಳ ಅತ್ಯಂತ ಶುಭ,ಅದರಲ್ಲೂ ಆಧ್ಯಾತ್ಮಿಕ ಪ್ರಪಂಚಕ್ಕೆ ಶುಭಕರವಾಗಿದೆ,ದೇಶದ ಜನತೆ ಧಾರ್ಮಿಕತೆ ಬಗ್ಗೆ ಅತ್ಯಂತ ಶ್ರದ್ಧೆ ತೋರಿದ್ದಾರೆ ,ಇದು ಅದೃಷ್ಟವೇ ಸರಿ ಎಂದು ತಿಳಿಸಿದರು.
ಅತೀ ದೊಡ್ಡ ಸಂಖ್ಯೆಯಲ್ಲಿ ಯುವಜನರು ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದು ಅವರಲ್ಲಿ ನಮ್ಮ ದರ್ಮದ ಬಗ್ಗೆ ಜಾಗೃತಿ ಮೂಡುತ್ತಿದೆ ಇದು ಒಳ್ಳೆಯದು ಎಂದು ಶ್ರೀಗಳು ಸಂತಸಪಟ್ಟರು.
ಇಡೀ ಕುಂಭಮೇಳದ ದಿನಗಳಲ್ಲಿ ನಮ್ಮ ದೇಶ ಅಷ್ಟೇ ಅಲ್ಲ ಇಡೀ ಪ್ರಪಂಚಕ್ಕೆ ಒಳ್ಳೆಯದಾಗಲಿ ಎಂದು ನಮ್ಮ ಭಾರತ ಪ್ರಾರ್ಥಿಸಿದೆ ನಮ್ಮ ವೇದ ಪದ್ಧತಿಯು ಸಹ ಇದನ್ನೇ ಬೋಧಿಸುತ್ತದೆ ಇದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂದು ಹೇಳಿದರು.
ಮುಂದೆ ಆಗುವ ಅನಾಹುತಗಳು ಕಷ್ಟಗಳು ತಪ್ಪಬೇಕಾದರೆ ಯುವಜನರು ಸೇರಿದಂತೆ ಇಡೀ ದೇಶದ ಜನತೆ ಮತ್ತು ಪ್ರಜಾಪ್ರತಿನಿಧಿಗಳು ದೈವಿಕ ಭಾವನೆ ಹೊಂದಿರಬೇಕು ಆದಷ್ಟು ದೇವಸ್ಥಾನಗಳನ್ನು ದರ್ಶಿಸಬೇಕು, ಪುರಾತನ ಆಲಯಗಳನ್ನು ದರ್ಶನ ಮಾಡಬೇಕು ದೇವಸ್ಥಾನಗಳ ಜೀರ್ಣೋದ್ಧಾರಗಳು ಆದರೆ ಇನ್ನೂ ಒಳಿತಾಗಲಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಪ್ರಜಾಪ್ರತಿನಿಧಿಗಳು ದೈವಿಕ ಭಾವನೆ ಹೊಂದುವ ಜೊತೆಗೆ ಎಲ್ಲಾ ಮಠಗಳು ಉಪಾಸನೆಗಳು ಒಂದೇ ಎಂಬುದನ್ನು ಅರಿಯಬೇಕು. ನಮ್ಮ ಆಚಾರ್ಯರು ಕೂಡ ಮಹತ್ವದ ಸಂದೇಶಗಳನ್ನು ನೀಡಿದ್ದಾರೆ ಅವರ ಆಶಯಗಳನ್ನು ಸಂದೇಶಗಳನ್ನು ಪಾಲಿಸಬೇಕು ನಾವೆಲ್ಲರೂ ಸಾತ್ವಿಕ ಜೀವನ ನಡೆಸಿದರೆ ಖಂಡಿತ ಕಷ್ಟಕೋಟಲೆಗಳಿಂದ ಸ್ವಲ್ಪವಾದರೂ ಪಾರಾಗಬಹುದು ಎಂದು ತಿಳಿಸಿದರು
ಮುಂದಿನ ದಿನಗಳಲ್ಲಿ ಅನಾಹುತಗಳು ಇದ್ದೇ ಇರುತ್ತದೆ. ಮೊದಲು ಜನರಲ್ಲಿರುವ ಅತೃಪ್ತಿ ಭಾವನೆ ಹೋಗಬೇಕು ಸದಾ ಹರಿಹೀ ಓಂ, ಓಂ ನಮಃ ಶಿವಾಯ ಜಪಿಸಬೇಕು, ಇಂದು ಅತ್ಯಂತ ಶುಭದಿನ, ಎಲ್ಲಾ ಗ್ರಹಗಳು ಒಂದೇ ರೇಖೆಯಲ್ಲಿ ಬಂದಿರುತ್ತದೆ ಎಂದು ಶ್ರೀಗಳು ತಿಳಿಸಿದರು.
ಈ ಮಹಾಶಿವರಾತ್ರಿಯಂದು ಇಡೀ ನಾಡಿನ ಜನತೆಗೆ ಶುಭವಾಗಲಿ ಎಲ್ಲರೂ ತಪ್ಪದೇ ಶಿವ ಸ್ಮರಣೆ ಮಾಡಿ ಹರಾ,ಜರಾ ಮಹಾದೇವ ಎಂದು ಹೇಳಿ ಓಂ ನಮಃ ಶಿವಾಯ ಎಂದು ಹೇಳುತ್ತಾ ಒಂದು ಚೊಂಬು ನೀರಿನ ಅಭಿಷೇಕ ಮಾಡಿ ಆ ಶಿವನೇ ಎಲ್ಲರನ್ನು ಆಶೀರ್ವದಿಸುತ್ತಾನೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉಪಸಿತರಿದ್ದರು.