ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Spread the love

ಮೈಸೂರು: ಅಥರ್ವ ಲೈಫ್ ಸ್ಕಿಲ್ಸ್
ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಭಾರತದ ಧ್ವಜ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಬಿಡಿಸುವ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಒಟ್ಟು ನಾಲ್ಕು ವಿಭಾಗಗಳ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಎಲ್ ಕೆ ಜಿ ವಿಭಾಗ:
ಮೊದಲ ಬಹುಮಾನ
ಸುದ್ದಿ ಮುಕ್ತಕ, ದ್ವಿತೀಯ ಈಶನ ಬಿ ಗೌಡ,

1ನೇ ತರಗತಿಯಿಂದ 3ನೇ ತರಗತಿಯ ವಿಭಾಗದ ಮೊದಲನೇ
ಬಹುಮಾನ ತನ್ವಿ ಎಸ್ ಪಿ, ದ್ವಿತೀಯ ವಿಶಾಲ್ ಆರ್ ಗೌಡ, ತೃತೀಯ ಆರ್ಣ ಎಂ ಎ,
4ನೇ ತರಗತಿಯಿಂದ 6ನೇ ತರಗತಿಯ ವಿಭಾಗದಲ್ಲಿ ಮೊದಲನೇ ಬಹುಮಾನ ಧೀರಜ್, ದ್ವಿತೀಯ ಬಹುಮಾನ ಅದ್ವೈತ ಜಿ, ತೃತೀಯ ಬಹುಮಾನ ವಿಪ್ರತ,
7ನೇ ತರಗತಿಯಿಂದ 8ನೇ ತರಗತಿ ವಿಭಾಗದಲ್ಲಿ ವಿಜೇತರಾದ ನಿತ್ಯಕ್ಲಿನ ಶಿಲ್ಪ ಅವರಿಗೆ ಬಹುಮಾನ ವಿತರಿಸಲಾಯಿತು.

ಎಲ್ಲಾ ಸ್ಪರ್ಧಾ‌‌ಳುಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಈ ವೇಳೆಅಥರ್ವ ಲೈಫ್ ಸ್ಕಿಲ್ಸ್
ಫೌಂಡೇಶನ್ ಅಧ್ಯಕ್ಷೆ ಪುಷ್ಪ ಅವರು ಮಾತನಾಡಿ,ದೇಶದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಪಟ್ಟ ಕಷ್ಟ, ತ್ಯಾಗ ಮತ್ತು ಬಲಿದಾನ ಅರಿತಾಗ ದೇಶದ ಬಗ್ಗೆ ಪ್ರೀತಿ ಮೂಡುತ್ತದೆ ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್,
ರುಕ್ಮಿಣಿ, ಮೇನಕ, ಲಾವಣ್ಯ, ಅನುಷಾ, ಸನತ್, ಚಾರುಲತಾ ಪ್ರಿಯಾಂಕ ಮತ್ತಿತರರು ಹಾಜರಿದ್ದರು.