ರೇಷ್ಮೆ‌ ಸೀರೆಯಲ್ಲಿ ಕಂಗೊಳಿಸಿದ ಪಾರ್ವತಿದೇವಿ

Spread the love

ಮೈಸೂರು: ನವರಾತ್ರಿ ಹಬ್ಬದ ಆರನೆ ದಿನವಾದ ಮಂಗಳವಾರ ಪಾರ್ವತಿ ಅಮ್ಮನವರ ಅರಿಶಿಣ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಳು.

ಮೈಸೂರಿನ ಅಗ್ರಹಾರ ರಸ್ತೆಯಲ್ಲಿರುವ ಕೆಆರ್ ಪೊಲೀಸ್ ಸ್ಟೇಷನ್ ಪಕ್ಕದ ಶ್ರೀ ಮಹಾ ಗಣಪತಿ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ಇಂದು ವಿಶೇಷವಾಗಿ ಸೀರೆ ಉಡಿಸಿ ಅಲಂಕಾರ ಮಾಡಲಾಗಿತ್ತು.

ದೇವಿಗೆ‌ ಸೀರೆ ಉಡಿಸಿ ಬಳೆಗಳನ್ನು ಇಟ್ಟು ಬೆಳ್ಳಿಯ ಕೈಗಳು ಕವಚಗಳನ್ನು ಜೋಡಿಸಲಾಗಿತ್ತು ಹೂಗಳು ಮತ್ತು ಹಣ್ಣುಗಳು‌ ಇಟ್ಟು ಪೂಜೆ ಸಲ್ಲಿಸಲಾಯಿತು.

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ವಿಶೇಷ ಅಲಂಕಾರ‌ ಮಾಡಿದ್ದು,ಯೋಗಾನಂದ ಅವರು ಪೂಜಾ ಕಾರ್ಯ ನೆರವೇರಿಸಿದರು.