ಅಧ್ಯಯನ ಶಾಲೆಯಲ್ಲಿ ಪುಣ್ಯಸ್ಮರಣೆ ಆಚರಣೆ

Spread the love

ಮೈಸೂರು: ಡಾ. ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯನ್ನು ಮೈಸೂರಿನ ಅಧ್ಯಯನ ಶಾಲೆಯಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಶಾಲೆಯ ಮುಖ್ಯಸ್ಥರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿದರು.

ಪುನೀತ್ ಅವರ ಜೀವನ ಮತ್ತು ಸಾಧನೆ ಕುರಿತು ಶಾಲೆಯ ಕಾರ್ಯದರ್ಶಿ ಯವರು ಮಕ್ಕಳಿಗೆ ತಿಳಿಸಿಕೊಟ್ಟರು.

ನಂತರ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ,ನಮನ ಸಲ್ಲಿಸಲಾಯಿತು.ವಿದ್ಯಾರ್ಥಿಗಳು ಕೆಂಪು ಗುಲಾಬಿ ಹಿಡಿದು ಅಪ್ಪುವಿನ ಭಾವಚಿತ್ರ ಪ್ರದರ್ಶಿಸಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಯನ ಶಾಲೆಯ ಮುಖ್ಯಸ್ಥರಾದ ಎಂ ಪಾರ್ವತಿ ದೇವಿ, ಮುಖ್ಯೋಪಾಧ್ಯಾಯರಾದ ಪುಟ್ಟಸ್ವಾಮಿಗೌಡರು ಸೇರಿದಂತೆ ಪ್ರಾಂಶುಪಾಲರು ,ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಪುನೀತ್ ಅವರಿಗೆ ನಮನ ಸಲ್ಲಿಸಿದರು.