ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ನೊಂದಣಿಯಾ ದವರಿಗೆ ಗುರುತಿನ ಚೀಟಿಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹೆಚ್ ವಿ ರಾಜೀವ್ ವಿತರಿಸಿದರು
ನೋಂದಣಿ ಕಾರ್ಯವು ಕಳೆದ ಒಂದು ತಿಂಗಳ ಹಿಂದೆ ಚಾಮರಾಜನಗರ ಮೈಸೂರು ಮತ್ತಿತರ ಕಡೆ ನಡೆದು 200 ಸದಸ್ಯರನ್ನು ನೋಂದಾಯಿಸಲಾಗಿತ್ತು.
ಆ ಸದಸ್ಯರ ಗುರುತಿನ ಚೀಟಿಗಳನ್ನು ಹೆಚ್. ವಿ ರಾಜೀವ್ ಅವರು ವಿತರಿಸಿ ಮಾತನಾಡಿದರು.
ಈಗಾಗಲೇ ರಾಜ್ಯದಲ್ಲಿ ನೊಂದಣಿ ಕಾರ್ಯವು ಭರದಿಂದ ಸಾಗುತ್ತಿದ್ದು ಅದರಲ್ಲೂ ವಿಶೇಷವಾಗಿ ಚಾಮರಾಜನಗರ ಮತ್ತು ಮೈಸೂರಿನಲ್ಲಿ ವಿಪ್ರರು ಹೆಚ್ಚು ಸದಸ್ಯರಾಗಬೇಕೆಂದು ಕರೆ ನೀಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್ ರಂಗನಾಥ ಅವರು ಮಾತನಾಡಿ ಮೈಸೂರಿನಲ್ಲಿ ಸದಸ್ಯರಾಗ ಬಯಸುವ ವಿಪ್ರರು ದೂರವಾಣಿ 9964524275 ಕರೆ ಮಾಡಿದರೆ ಐದರಿಂದ ಹತ್ತು ಜನ ಇದ್ದಲ್ಲಿ ನಿಮ್ಮಲ್ಲಿಗೇ ಬಂದು ನೊಂದಾಯಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಪ್ರಮುಖಂಡರಾದ ಶೇಷಪ್ರಸಾದ್, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾದ ಪ್ರಶಾಂತ್ ಭರದ್ವಾಜ್ ಇನ್ನು ಮುಂತಾದವರು ಉಪಸ್ಥಿತರಿದ್ದರು.