ಅಜೀಜ್ ಸೇಟ್ ರ ಹೆಸರಿನ ನಾಮಫಲಕಕ್ಕೆ ಮಸಿ:ತೇಜಸ್ವಿ ಖಂಡನೆ

ಮೈಸೂರು: ಮಾಜಿ ಸಚಿವ ದಿವಂಗತ
ಅಜೀಜ್ ಸೇಟ್ ಅವರ ಹೆಸರಿನ ನಾಮಫಲಕಕ್ಕೆ ಮಸಿ ಬಳಿದಿರುವುದು ಸರಿಯಲ್ಲ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಖಂಡಿಸಿದ್ದಾರೆ.

ಅಜೀಜ್ ಸೇಠ್ ಅವರ ಕೊಡುಗೆ ಮೈಸೂರಿಗೆ ಅಪಾರ, ಅವರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಅಜೀಜ್ ಸೇಟ್ ಅವರು ಮೈಸೂರಿನ ಪ್ರಭಾವಿ ರಾಜಕಾರಣಿ ಯಾಗಿದ್ದರು, ಅಜೀಜ್ ಅವರು ಮೈಸೂರು ಜಿಲ್ಲೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಅಂತವರ ಇತಿಹಾಸ ಅರಿಯದೆ ಅವರ ಹೆಸರಿರುವ ವೃತ್ತಕ್ಕೆ ಕಪ್ಪು ಮಸಿ ಬಳಿದಿರುವುದು ಬೇಸರ ತಂದಿದೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಅಜೀಜ್ ಸೇಟ್ ಅವರು ದೇವರಾಜ ಅರಸು ಅವರ ಆತ್ಮೀಯರಾಗಿದ್ದರು ಮತ್ತು ಅವರ ಸಂಪುಟದಲ್ಲಿ ಕಾರ್ಮಿಕ,ಕಂದಾಯ, ವಕ್ಫ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ಕರ್ನಾಟಕ ರಾಜ್ಯದ ಪ್ರಥಮ ಎಂ ಎಲ್ ಸಿ ಆಗಿದ್ದರು ಅಲ್ಲದೆ ಕನ್ನಡ ಹೋರಾಟಗಾರರ ಮೇಲೆ ಅಪಾರ ಪ್ರೀತಿ ಹೊಂದಿದ್ದ ಏಕೈಕ ಮುಸ್ಲಿಂ ನಾಯಕ ಯಾರಾದರೂ ಇದ್ದರೆ ಅದು ಅಜೀಜ್ ಸೇಟ್ ಅವರು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಅಜೀಜ್ ಸೇಟ್ ಅವರ ಇತಿಹಾಸ ತಿಳಿಯದೆ ಅವರ ಹೆಸರಿರುವ ಕಂಬಕ್ಕೆ ಯಾರೊ ಮಸಿ ಬಳಿದಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಈ ಘಟನೆಯಿಂದಾಗಿ ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಕನ್ನಡಪರ ಹೋರಾಟಗಾರನಾಗಿ ವೈಯಕ್ತಿಕ ವಾಗಿ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಅಜೀಜ್ ಸೇಟ್ ಅಂತಹ ಶ್ರೇಷ್ಠ ರಾಜಕಾರಣಿ ನರಸಿಂಹ ರಾಜ ಕ್ಷೇತ್ರದಿಂದ ಸುದಿರ್ಘ ವಾಗಿ ಜನರಿಂದ ಆಯ್ಕೆಯಾದ ರಾಜಕಾರಣಿ,ಅವರು ಮೈಸೂರಿನವರು ಎಂದು ಹೇಳಲು ಹೆಮ್ಮೆ ಪಡುವ ವಿಷಯ ಎಂದಿದ್ದಾರೆ.

ಪೋಲಿಸ್ ಇಲಾಖೆ ಇಂತಹ ಮಹಾನೀಯರ ವೃತ್ತಿಗಳಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ..