ಮೈಸೂರು: ನಾಡಹಬ್ಬ ದಸರಾ 2024ರ ಆಹಾರ ಮೇಳದ ಅಧ್ಯಕ್ಷರಾಗಿ ಕೆಪಿಸಿಸಿ ಸದಸ್ಯ ಜಿ ಶ್ರೀನಾಥ್ ಬಾಬು, ಉಪಾಧ್ಯಕ್ಷರಾಗಿ ನಗರ ಪಾಲಿಕೆ ಮಾಜಿ ಸದಸ್ಯ ರಘುರಾಜ್ ಅರಸ್ ಆಯ್ಕೆಯಾಗಿದ್ದಾರೆ.
ಜಿ ಶ್ರೀನಾಥ್ ಬಾಬು ಮತ್ತು ರಘುರಾಜ್ ಅರಸ್ ಅವರಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಆಹಾರ ಭದ್ರತೆ ಮತ್ತು ಸುರಕ್ಷತೆ ಪ್ರಾಧಿಕಾರ ಜಿಲ್ಲಾ ಅಂಕಿತ ಅಧಿಕಾರಿ ಡಾ ಕಾಂತರಾಜು ಅವರು ಹೂಗೊಚ್ಚ ನೀಡಿ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ವರುಣ ಮಹಾದೇವ್, ಕಿಶೋರ್ ಕುಮಾರ್, ಮಹಾನ್ ಶ್ರೇಯಸ್, ಸಂತೋಷ್ ಕಿರಾಳು, ಚೇತನ್ ಗೌಡ, ಹರೀಶ್ ನಾಯ್ಡು ಮತ್ತಿತರ ಸದಸ್ಯರು ಹಾಜರಿದ್ದರು.