ಮೈಸೂರು: ಮೈಸೂರಿನ ಅಗ್ರಹಾರ ಕೆಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ಮೃತ್ಯುಂಜಯ ಸ್ವಾಮಿ ದೇವಾಲಯದಲ್ಲಿ ಶ್ರೀ ಪಾರ್ವತಿ ದೇವಿಗೆ ಕೊನೆಯ ಆಷಾಢ ಶುಕ್ರವಾರ ಪ್ರಯುಕ್ತ ಭವ್ಯ ಅಲಂಕಾರ ಮಾಡಲಾಗಿತ್ತು.

ವಿಧವಿಧವಾದ ಹೂಗಳು ಮತ್ತು ಕೇಸರಿ ಹಸಿರು ಬಣ್ಣದಲ್ಲಿ ತಾಯಿ ಕಂಗೊಳಿಸುತ್ತಿದ್ದಳು.
ಗುರುವಾರ ಚಾಮುಂಡೇಶ್ವರಿ ವರ್ಧಂತಿ, ಕೊನೆಯ ಆಷಾಢ ಶುಕ್ರವಾರ ಆದುದರಿಂದ ಪಾರ್ವತಿ ದೇವಿಗೆ ದೇವಾಲಯದ ಶಿವಾರ್ಚಕರಾದ ಎಸ್.ಯೋಗಾನಂದ ಅವರು ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗಿನಿಂದಲೇ ನೂರಾರು ಭಕ್ತಾದಿಗಳು ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಈ ವೇಳೆ ಬಂದ ಭಕ್ತರೆಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
