ಅಧ್ಯಯನ ಶಾಲೆಯಲ್ಲಿ ಮಕ್ಕಳ ವಾಕ್, ಭಾಷಾ ಬುದ್ಧಿಶಕ್ತಿ ಕುರಿತು ಸಮಾಲೋಚನೆ

ಮೈಸೂರು: ಮೈಸೂರಿನ ಅಧ್ಯಯನ ಶಾಲೆಯಲ್ಲಿ ಮಕ್ಕಳ ವಾಕ್ ಭಾಷಾ ಮತ್ತು ಬುದ್ಧಿಶಕ್ತಿ ಕುರಿತು ಸಮಾಲೋಚನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಒಂದರಿಂದ ಹತ್ತನೇ ತರಗತಿ ಮಕ್ಕಳು ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆ ಕುರಿತು ಡಾ. ಅರ್ಪಿತ (ವಾಕ್ ಭಾಷಾ ತಜ್ಞರು )ಅವರು ಒಂದೊಂದು ಮಗುವಿನ ಜೊತೆ ಸಮಾಲೋಚನೆ ಮಾಡಿ ಮಕ್ಕಳ ವಾಕ್ ಭಾಷಾ ಮತ್ತು ಬುದ್ಧಿಶಕ್ತಿ ಮಟ್ಟವನ್ನು ಅರಿತು ಕಲಿಕೆಗೆ ಸಹಾಯ ಆಗುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಎಂ ಪಾರ್ವತಿ ದೇವಿ, ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ,ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.