ಮೈಸೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ವಿಭಾಗದ ವತಿಯಿಂದ ಇಂದು ಬಾಲಿಕಾ ಛಾತ್ರ ಪಾರ್ವಮ್ ಎಂಬ ವಿಭಾಗ ವಿದ್ಯಾರ್ಥಿನಿಯರ ಸಮ್ಮೇಳನವು ಮಹಾರಾಜಾ ಶತಮಾನೋತ್ಸವ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ, ಟಿ ನರಸೀಪುರ, ಹುಣಸೂರು, ಚಾಮರಾಜನಗರ, ಪಿರಿಯಾಪಟ್ಟಣ, ಕೆ.ಆರ್ ನಗರದಿಂದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿನಿರು ಆಗಮಿಸಿದ್ದುದು ವಿಶೇಷ.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಧನ ತಂತ್ರಿಯವರು ಮಾತನಾಡಿ, ರಾಷ್ಟ್ರೀಯತೆಯನ್ನು ಕುರಿತು ಭಾರತೀಯರಿಗೆ ಗುರುತು ಅಂತ ಹೇಳಿದ್ರೆ ಅದು ರಾಷ್ಟ್ರೀಯತೆ, ಭಾರತದ ಭವ್ಯ ಪರಂಪರೆ,ಭಾರತ ಬೆಳೆದು ಬಂದ ಹಾದಿ, ಭಾರತದ ಸಂಪೂರ್ಣ ಇತಿಹಾಸದ ಕುರಿತು ತಿಳಿಸಿದರು.
ಮುಖ್ಯ ವಕ್ತಾರರಾಗಿ ಆಗಮಿಸಿದ ಪ್ರೊಫೆಸರ್ ರಾಜಲಕ್ಷ್ಮಿ ಅವರು ರಾಷ್ಟ್ರದ ಪುನರ್ ನಿರ್ಮಾಣದಲ್ಲಿ ವಿದ್ಯಾರ್ಥಿನಿಯರ ಪಾತ್ರ ಮತ್ತು ಮಹಿಳಾ ಸಬಲೀಕರಣ ಎಂಬ ವಿಷಯದ ಕುರಿತು ಮಾತನಾಡಿದರು.
ಖೋ -ಖೋ ವಿಶ್ವಕಪ್ ಗೆದ್ದು ಅತ್ಯುತ್ತಮ ಆಟಗಾರ್ತಿಯೆಂದು ಪ್ರಶಂಸೆಗೆ ಪಾತ್ರರಾದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲೂಕಿನ ಕುರಬೂರು ಗ್ರಾಮದ ಚೈತ್ರ ಬಿ ಅವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸನ್ಮಾನಿಸಿ ಶುಭ ಹಾರೈಸಲಾಯಿತು.

ನಗರದ ಪ್ರಮುಖ ರಸ್ತೆಗಳಾದ ರಾಮಸ್ವಾಮಿ ವೃತ್ತ ಮತ್ತು ಚಾಮರಾಜ ಜೋಡಿ ರಸ್ತೆಯಲ್ಲಿ ಶೋಭಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂತ ವಿದ್ಯಾರ್ಥಿನಿ ಪ್ರಮುಖರಾದ ಸುಧಾ ಶಣೈ, ವಿಭಾಗ ವಿದ್ಯಾರ್ಥಿನಿ ಪ್ರಮುಖರಾದ ವಸಂತ, ಪ್ರಾಂತ ಕಾರ್ಯಸಮಿತಿ ಸದಸ್ಯೆಯರಾದ ದೀಪಿಕಾ ಡಿ. ಎ, ಪ್ರಾಂತ ಕಾರ್ಯಕಾರಣಿ ಸದಸ್ಯರಾದ ಇಂಚರ, ಎಬಿವಿಪಿ ಯ ಹಿರಿಯ ಕಾರ್ಯಕರ್ತರು ಮತ್ತು ಮೈಸೂರು ಮಹಾನಗರದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.