ಬೆಳಗಾವಿ: ದಕ್ಷಿಣ ಕಾಶಿ ಖ್ಯಾತಿಯ ಬೆಳಗಾವಿಯ ಹರಿಹರ ಶ್ರೀ ಕಪಿಲೇಶ್ವರ ದೇಗುಲಕ್ಕೆ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
ದೇಗುಲಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಶ್ರೀ ಕಪಿಲೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶಿಲಿಂಗದ ಮುಂದೆ ಕುಳಿತು ಅಭಿಷೇಕವನ್ನು ನೆರವೇರಿಸಿದರು.ನಂತರ ಮಂತ್ರ ಪಠಣ ಮಾಡಿ ದೇವರಿಗೆ ಮಂಗಳಾರತಿ ಮಾಡಿದರು.
ದೇವರಿಗೆ ಶಿರಬಾಗಿ ನಮಿಸಿದರು.

ನಂತರ ರುದ್ರಾಕ್ಷಿ ಮಾಲೆ ಹಿಡಿದು ಡಿಕೆಶಿ ಜಪ ಕೂಡಾ ಮಾಡಿದ್ದು ವಿಶೇಷವಾಗಿತ್ತು.

ಬೆಳಗಾವಿ ಅಧಿವೇಶನ ಯಶಸ್ವಿಯಾಗಲಿ,ನಾಡಿನಲ್ಲಿ ಕಾಡುತ್ತಿರುವ ತೊಂದರೆಗಳೆಲ್ಲ ದೂರವಾಗಿ ಶಾಂತಿ ನೆಲಸಲಿ ಎಂದು ಪ್ರಾರ್ಥಿಸಿದ್ದಾಗಿ ಈ ವೇಳೆ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
