
ಮೈಸೂರು: ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಸಾರ್ವಜನಿಕರು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದರು.

ಚಾಮುಂಡೇಶ್ವರಿ ನಗರ ಮಂಡಲದ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿರುವ ಯುವಕರಿಂದ ಹಿರಿಯರಿಗೆ ನಮನ ಕಾರ್ಯಕ್ರಮವನ್ನು ರಾಮಕೃಷ್ಣನಗರದ ಲಿಂಗಾಂಬುದಿ ಕೆರೆಯ ಬಳಿ ಹಮ್ಮಿಕೊಂಡಿದ್ದ ವೇಳೆ ಯದುವೀರ್ ಮಾತನಾಡಿದರು.
ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಬಿ. ಎಂ. ರಘು, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ರಾಕೇಶ್ ಭಟ್, ಪ್ರಧಾನ ಕಾರ್ಯದರ್ಶಿ ಈರೇಗೌಡ, ಉಪಾಧ್ಯಕ್ಷರಾದ ಹೆಚ್ ಜಿ ರಾಜಮಣಿ, ಮೃಗಲಾಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಕುಮಾರ್, ಯುವ ಮೋರ್ಚಾ ಮಂಡಲದ ಅಧ್ಯಕ್ಷ ಮಧು ಸೋಮಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಚಂದನ್ ಗೌಡ, ಸಾಗರ್ ಸಿಂಗ್, ಉಪಾಧ್ಯಕ್ಷರಾದ ರಾಘವೇಂದ್ರ, ಸೂರ್ಯಪ್ರಕಾಶ್, ಮಧು, ಸಂಜಯ್ ಪ್ರಸನ್ನ, ಅವಿನಾಶ್, ಮಂಡಲದ ಪ್ರಮುಖರಾದ ಶಶಿಕಾಂತ್, ರಾಘವೇಂದ್ರ, ಪ್ರತಾಪ್, ವಿನುತಾ, ಕಲಾವತಿ, ತುಳಸಿ, ರಮಾಬಾಯಿ, ಶುಭಶ್ರೀ, ಪುಟ್ಟಮ್ಮಣ್ಣಿ, ಮಂಜುಳಾ, ನಾಗರಾಜ್ ಜನ್ನು, ಕಾಂತರಾಜ ಅರಸ್, ದೇವರಾಜು, ಶ್ರೀನಿವಾಸ್ ಪ್ರಸಾದ್, ರಂಗೇಶ್, ರವಿ ಉತ್ತಪ್ಪ, ರಾಧಾ ಮುತಾಲಿಕ್, ಸುಬ್ರಮಣ್ಯ ರಾಜು, ಪ್ರಭಾಕರ್ ಮತ್ತಿತರರು ಹಾಜರಿದ್ದರು.