ಮೈಸೂರು: ಕಡಕೋಳ ಶ್ರೀ ಬೀರೇಶ್ವರ ಸ್ವಾಮಿ ಮತ್ತು ಕಾಳಮ್ಮ ಟ್ರಸ್ಟ್ ಅಧ್ಯಕ್ಷರಾಗಿ ಬಿ ನಾಗರಾಜು ಮತ್ತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂಜನಗೂಡು – ಮೈಸೂರು ಊಟಿ ರಸ್ತೆ ಕಡಕೋಳ ಬಳಿ ಇರುವ ಶ್ರೀ ಬೀರೇಶ್ವರ ಸ್ವಾಮಿ ಮತ್ತು ಕಾಳಮ್ಮ ಟ್ರಸ್ಟ್ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಬಿ ನಾಗರಾಜ್ ಅವರನ್ನು ಟ್ರಸ್ಟಿನ ಎಲ್ಲಾ ಸದಸ್ಯರು 33 ಹಳ್ಳಿ ಗಡಿ ಯಜಮಾನರಾದ ಸಿದ್ದರಾಮ ಅವರ ನೇತೃತ್ವದಲ್ಲಿ ನಡೆದ ಸಭೆ ನಡೆಸಿದರು.
ಟ್ರಸ್ಟ್ ನ ಅಧ್ಯಕ್ಷ ಬಿ ನಾಗರಾಜು ಅವರ ಅಧ್ಯಕ್ಷ ಅವಧಿ ಪೂರ್ಣಗೊಂಡಿದ್ದು, ಟ್ರಸ್ಟ್ ನ ಎಲ್ಲಾ ಸದಸ್ಯರು 33 ಹಳ್ಳಿ ಗಡಿ ಯಜಮಾನರಾದ ಸಿದ್ದರಾಮ ಅವರ ನೇತೃತ್ವದಲ್ಲಿ ಸಭೆ ಸೇರಿ ನಾಗರಾಜು ಅವರನ್ನೇ ಮತ್ತೊಮ್ಮೆ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸತತವಾಗಿ 4ನೇ ಅವಧಿಗೆ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿ ಮತ್ತೊಮ್ಮೆ ದೇವರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಯಜಮಾನರು ಟ್ರಸ್ಟಿನ ಎಲ್ಲ ಸದಸ್ಯರಿಗೂ ನಾನು ಸದಾ ಚಿರಋಣಿಯಾಗಿ ಆಭಾರಿಯಾಗಿರುತ್ತೇನೆ ಎಂದು ನೂತನ ಅಧ್ಯಕ್ಷ ಬಿ ನಾಗರಾಜು ತಿಳಿಸಿದರು.