ಹಾಸನ: ಹಾಸನದಲ್ಲಿ ಆಯೋಜಿಸಿದ್ದ ಜನಕಲ್ಯಾಣೋತ್ಸವ ಸಮಾವೇಶ ಯಶಸ್ವಿಯಾಗಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಕೆಪಿಸಿಸಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೈಸೂರಿನಿಂದ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಅವರು ಮತ್ತು ಅವರ ಸಂಘಡಿಗರು ಸಿದ್ದು ಅಭಿಮಾನಿಗಳು ಹಾಸನಕ್ಕೆ ತೆರಳಿ ಸಮಾವೇಶದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ನಜರ್ಬಾದ್ ನಟರಾಜ್ ಅವರು ಕೈನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವುಳ್ಳ ಪುಟ್ಟ ಕಟೌಟ್ ಹಿಡಿದು ಸಿದ್ದು ಪರ ಘೋಷಣೆ ಕೂಗುತ್ತ ಸಂಭ್ರಮಿಸಿದರು.

ಈ ವೇಳೆ ಅವರು ಸಂಗಡಿಗರೊಂದಿಗೆ ಸಮಾವೇಶದ ಬ್ಯಾನರ್ ಬಳಿ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು.