ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲಿ 3 ದಿನಗಳ ಕಾಲ ಬಾಳೆ ಮೇಳ ಆಯೋಜನೆ ಮಾಡಲಾಗಿದ್ದು ನೂರಕ್ಕೂ ಹೆಚ್ಚು ತಳಿಯ ಬಾಳೆ ಹಣ್ಣುಗಳನ್ನು ನೋಡುವ ಮತ್ತು ಕೊಳ್ಳುವ ಭಾಗ್ಯ ನಗರದ ಜನರಿಗೆ ಸಿಕ್ಕಿದೆ.

ಸಹಜ ಸಮೃದ್ಧ ಸಂಸ್ಥೆ ವತಿಯಿಂದ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಬಾಳೆ ಮೇಳ ಆಯೋಜನೆ ಮಾಡಲಾಗಿದೆ.
ಶಾನುಬಾಳೆ, ಕಸ್ತೂರಿ ಬಾಳೆ, ಚಂದ್ರ ಬಾಳೆ, ನಂಜನಗೂಡು ರಸಬಾಳೆ ಸೇರಿದಂತೆ ನೂರಾರು ಬಗೆಯ ಬಾಳೆ ಹಣ್ಣುಗಳನ್ನು ಪ್ರದರ್ಶಿಲಾಗಿದೆ.
ಒಂದೇ ಗೊನೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಾಳೆ ಹಣ್ಣು ಹೊಂದಿರುವ 4 ರಿಂದ 5 ಅಡಿ ಉದ್ದದ ಸಹಸ್ರ ಬಾಳೆ ಈ ಮೇಳದ ಆಕರ್ಷಣೆಯಾಗಿದೆ.
ಮದುವೆ, ಗೃಹಪ್ರವೇಶ ಸೇರಿದಂತೆ ಶುಭ ಕಾರ್ಯಗಳಲ್ಲಿ ಮತ್ತು ಅಲಂಕಾರಕ್ಕೆ ಬಾಳೆಯನ್ನು ಬಳಕೆ ಮಾಡಲಾಗುತ್ತದೆ. ಬಾಳೆ ಬೆಳೆ ಹೆಚ್ಚಿನ ಲಾಭದಾಯಕವಾಗಿದೆ. ಬಾಳೆ ಬೆಳೆಯಲ್ಲಿ ಹಲವು ತಳಿಗಳು ಇವೆ. ರೈತರು, ಸಾರ್ವಜನಿಕರು ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ರೈತ ಪ್ರಸಾದ್ ಹೆಗ್ಡೆ ಮನವಿ ಮಾಡಿದ್ದಾರೆ.
