ಜಲ ಸೇನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸೈನಿಕ ಅಕಾಡೆಮಿಯಿಂದ ಗೌರವ

Spread the love

ಮೈಸೂರು: ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆ ಯಲ್ಲಿರುವ ಸೈನಿಕ ಅಕಾಡೆಮಿ ಸಂಸ್ಥೆ ವತಿಯಿಂದ ಭಾರತೀಯ ಜಲ ಸೇನೆಗೆ ಆಯ್ಕೆ ಆಗಿರುವ ಸೈನಿಕ ಅಕಾಡೆಮಿ ಅಭ್ಯರ್ಥಿಗಳಿಗೆ ಗೌರವ ಸಲ್ಲಿಸಲಾಯಿತು.

ಬೆಳವಾಡಿ ಗ್ರಾಮದ ಅಬಿನ್, ಹುಣಸೂರಿನ ನಿಜಾಮ್ ಎಂ ಐ, ಕುಶಾಲನಗರದ ಅಂಟೊರೊಸ್ ಅವರಿಗೆ ‌ಸೈನಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ಕಮಾಂಡೋ ಶ್ರೀಧರ ಸಿ ಎಂ ಅವರು ಗೌರವಿಸಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಶ್ರೀಧರ್, ನಮ್ಮ ದೇಶದ ಸೈನಿಕರು ಅಂದರೆ ಭೂ ಸೇನೆಯ ಸೈನಿಕರೆಂದು ತಿಳಿಯುತ್ತಾರೆ, ಆದರೆ ಸೇನೆಯಲ್ಲಿ 3 ವಿಭಾಗದ ಸೈನಿಕರು ಇರುತ್ತಾರೆ ಎಂದು ಹೇಳಿದರು.

ಭೂ ಸೇನೆ, ವಾಯು ಸೇನೆ ಮತ್ತು ಜಲ ಸೇನೆ. ಈ 3 ವಿಭಾಗಕ್ಕೂ ಸೇನೆ (ಮಿಲಿಟರಿ) ಎಂದು ಕರೆಯಲಾಗುತ್ತದೆ, ಸೈನಿಕ ಅಕಾಡೆಮಿಯಲ್ಲಿ ನೀಡುತ್ತಿರುವ ತರಬೇತಿಯಿಂದ ಈ ಬಾರಿ ಜಲ ಸೇನೆಗೂ ಆಯ್ಕೆ ಆಗಿರುವುದು ಬಹಳ ಸಂತೋಷ ತಂದಿದೆ, ದೇಶ ಸೇವೆ ಈಶ ಸೇವೆ ಎಂದು ಸೇವೆಗೆ ತೆರಳುತ್ತಿರುವ ಯುವ ಸೈನಿಕರಿಗೆ ಗೌರವ ಸನ್ಮಾನ ಮಾಡವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಸಹ ಸಂಸ್ಥಾಪಕಿ ಅನಿತಾ ಶ್ರೀಧರ, ಅಧ್ಯಾಪಕರುಗಳು, ಸಹ ಸಿಬ್ಬಂದಿಗಳು, ಸೈನಿಕ ಅಕಾಡೆಮಿಯ ಅಭ್ಯರ್ಥಿಗಳು ಉಪಸ್ಥಿತರಿದ್ದರು.