ಆಹಾರ ಸಾಮಗ್ರಿ ವಿತರಿಸಿ ಕನ್ನಡ ರಾಜ್ಯೋತ್ಸವ ಆಚರಿಸಿದ ಕೇರಳ ಯುವಕರು

ಮೈಸೂರು: 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕೇರಳದ ಕೈತಂಗ (ಹೆಲ್ಪಿಂಗ್ ಹ್ಯಾಂಡ್ಸ್) ಯುವಕರ ತಂಡ ಮಯೂರ ಕನ್ನಡ ಯುವಕರ ಬಳಗದ ಸಹಯೋಗದೊಂದಿಗೆ ಬಡವರಿಗೆ ಆಹಾರ ಸಾಮಗ್ರಿ ವಿತರಿಸಿ ಮಾದರಿಯಾದರು.

ಚಾಮರಾಜ ಜೋಡಿ ರಸ್ತೆಯಲ್ಲಿರುವ ಡಾ ರಾಜಕುಮಾರ್ ಪ್ರತಿಮೆ ಮುಂಭಾಗ
ಬಡವರಿಗೆ ಆಹಾರ ಸಾಮಗ್ರಿಗಳು ನೀಡುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಅದಕ್ಕೂ ಮುನ್ನ ಡಾಕ್ಟರ್ ರಾಜಕುಮಾರ್ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಕನ್ನಡ ಧ್ವಜ ಹಾರಿಸಿ 400 ಬಡ ಕುಟುಂಬದವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಮಯೂರ ಕನ್ನಡ ಯುವಕರ ಬಳಗದ ಗೌರವಾಧ್ಯಕ್ಷ ಜಿ ಶ್ರೀನಾಥ್ ಬಾಬು,ಕೇರಳದ ಯುವಕರ ಸಂಘಟನೆ ಈ ಬಾರಿ ನಮ್ಮ ಜೊತೆ ಸೇರಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸ ಉಂಟು ಮಾಡಿದೆ ಎಂದು ಹರ್ಷ‌ ವ್ಯಕ್ತಪಡಿಸಿದರು.

ನಮ್ಮಲ್ಲಿ ಬಹಳ ಮಂದಿ ಆಂಗ್ಲಭಾಷಾ ವ್ಯಾಮೋಹಕ್ಕೆ ಸಿಲುಕಿ ಕನ್ನಡ ಸಂಸ್ಕೃತಿಯನ್ನು ನಾಶಗೊಳಿಸಿಕೊಳ್ಳುತ್ತಿದ್ದಾರೆ. ಆಧುನಿಕ ಯುಗದಲ್ಲಿ ಅನ್ಯ ಭಾಷೆಗಳ ಕಲಿಕೆ ಅನಿವಾರ್ಯ,ಅನ್ಯಭಾಷೆಗಳನ್ನು ಕಲಿಯುವ ಜೊತೆಗೆ ಕನ್ನಡವನ್ನು ಹೆಚ್ಚಾಗಿ ಬಳಸುವ, ಪ್ರೀತಿಸುವ ಮೂಲಕ ಉಳಿಸಿ, ಬೆಳೆಸುವಂತಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆ‌ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಜಿ ಶೇಖರ್, ಜಿ ರಾಘವೇಂದ್ರ, ಕಿರಣ್, ಕಿಶೋರ್,
ಧೀನ್ ತಂಬಿ,ನಿತಿನ್, ಜೊಯೆಲ್, ವಿಷ್ಣು, ಮಲ್ಲೇಶ್,ಮಂಜುನಾಥ್, ಮಹಾನ್ ಫಯಾಸ್,ಶ್ರೀಕಾಂತ್ ಕಶ್ಯಪ್, ರಮೇಶ್,ಹರೀಶ್ ನಾಯ್ಡು ,ಮುಷೀರ್, ಸಂತೋಷ್ ಶನ್ಮುಗ,ಸುರೇಶ್,ಶಂಕರ, ನಾಗರಾಜ್ ಮತ್ತಿತರರು ಹಾಜರಿದ್ದರು.