ಎಚ್.ವಿ.ರಾಜೀವ್ ಅವರಿಗೆ ಅಭಿನಂದನೆಗಳ ಮಹಾಪೂರ

Spread the love

ಮೈಸೂರು: ಲಕ್ಷ ವೃಕ್ಷ ಆಂದೋಲನದ ರುವಾರಿ,ಸಹಾಕಾರಿ ಯೂನಿಯನ್ ಬ್ಯಾಂಕ್ ಅಧ್ಯಕ್ಷರು, ಮುಡಾ ಮಾಜಿ ಅಧ್ಯಕ್ಷ ಡಾ. ಎಚ್.ವಿ.ರಾಜೀವ್ ಅವರಿಗೆ ಅಭಿನಂದನೆಗಳ ಮಹಾಪೂರವೆ ಹರಿದುಬಂದಿದೆ.

ರಾಜೀವ್ ಅವರು ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾ ಮಂಡಳದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ಹಾಗಾಗಿ ಅಭಿಮಾನಿಗಳು ಅವರನ್ನು ಅಭಿನಂದಿಸಿದ್ದಾರೆ.

ಸಮಾಜ ಸೇವಕರಾದ ಕೇಶವ್ ಬಿ.ಜಿ ಅವರು ರಾಜೀವ್ ಅವರನ್ನು ವಿಶೇಷವಾಗಿ ಅಭಿನಂಧಿಸಿದ್ದಾರೆ.ರಾಜೀವ್ ಅವರಿಗೆ ಮೈಸೂರು ಪೇಟ ತೊಡಿಸಿ,ಶಾಲು ಹೊದಿಸಿ,ಭಾರೀ ಗಾತ್ರದ ಹಾರ ಹಾಕಿ ಶುಭ ಕೋರಿ ಕೇಕ್ ಕತ್ತರಿಸಿ ತಿನ್ನಿಸಿ ಸಂಭ್ರಮಿಸಿದರು

ಚಾಮುಂಡಿ ಪುರಂ ನಲ್ಲಿರುವ
ಎಚ್.ವಿ.ರಾಜೀವ್ ನಿವಾಸದ ಬಳಿ ಕೇಕ್ ಕತ್ತರಿಸಿ ವಿಜಯದ ಸಂಕೇತವಾದ ಎರಡು ಗೂಳಿಗಳು (ಬುಲ್ಸ್ ಗಳು) ಸಂಘರ್ಷಕ್ಕಿಳಿದಿರುವ ವಿಶೇಷ ಉಡುಗೊರೆಯನ್ನು ನೀಡಿ ಮುಂದಿನ ದಿನಗಳಲ್ಲಿ ಶಾಸಕರಾಗಿ ಬರುವಂತೆ ಕೇಶವ್ ಅವರು ಅಭಿಮಾನಿಗಳೊಂದಿಗೆ ಶುಭ ಹಾರೈಸಿದರು.

ಕೆ.ವಿ.ಮಲ್ಲೇಶ್,ಅಶೋಕ್,ಆರ್ ಕೆ ರವಿ,
ರಘು,ಮಂಜುನಾಥ್,ಚಂದ್ರು,ವಿಕಾಸ್ ಶಾಸ್ತ್ರಿ, ಶೇಷ ಪ್ರಸಾದ್,ಲ್ಯಾಂಡ್ರಿ ಮಂಜುನಾಥ್,ಹರೀಶ್ ರೆಡ್ಡಿ, ಸುರೇಶ್,ಶ್ರೀಕಾಂತ್,ಸುಬ್ರಹ್ಮಣ್ಯ,ರವೀಂದ್ರ,ಅನಂತ್ ರಾಜ್,ಜಿ.ಕುಮಾರ್ ಗೌಡ,ಶ್ರೀರಾಮ್,ವೆಂಕಟೇಶ್ ಗುಂಡ,ಮಹೇಶ್,ರವಿಕುಮಾರ್,ಮಂಜು ಶೆಟ್ಟಿ,ಹರಿ ಮತ್ತಿತರರು ಈ ವೇಳೆ ರಾಜೀವ್ ಅವರಿಗೆ ಶುಭ ಕೋರಿದರು.