ಪಾರ್ವತಿ ದೇವಿಗೆ‌‌ ಅರಿಶಿಣದ ಅಲಂಕಾರ

ಮೈಸೂರು: ನವರಾತ್ರಿಯ ಎರಡನೆ‌ ದಿನದ ಪ್ರಯುಕ್ತ ಪಾರ್ವತಿ ದೇವಿಗೆ‌‌ ಅರಿಶಿಣದ ಅಲಂಕಾರ ಮಾಡಲಾಗಿತ್ತು.

ಮೈಸೂರಿನ ಅಗ್ರಹಾರ‌‌,ಕೆ.ಆರ್.ಪೊಲೀಸ್ ಠಾಣೆ ಪಕ್ಕದಲ್ಲಿರುವ ಶ್ರೀ ಮಹಾಗಣಪತಿ ದೇವಾಲಯದ ಆವರಣದಲ್ಲಿರುವ ಪಾರ್ವತಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ದೇವಿಯನ್ನು ಸಂಪೂರ್ಣ‌ ಅರಿಶಣದಿಂದ ಅಲಂಕರಿಸಿ ವಿವಿಧ ಹೂಗಳು ಮತ್ತು ಬೆಳ್ಳಿಯಿಂದ ಅಲಂಕರಿಸಿ ನಿಂಬೆ ಹಣ್ಣಿನ ಅಲಂಕಾರ ಮಾಡಿದ್ದು ತ್ರಿಶೂಲ ಧಾರಿಯಾಗಿ ಮಾತೆ ಕಂಗೊಳಿಸುತ್ತಿದ್ದಳು.

ದೇವಾಲಯದ ಮುಖ್ಯ ಶಿವಾರ್ಚಕರಾದ ಎಸ್.ಯೋಗಾನಂದ ಅವರ ನೇತೃತ್ವದಲ್ಲಿ ವಿಶೇಷ ಅಲಂಕಾರ‌,ಪೂಜೆ ನೆರವೇರಿತು.