ಮೈಸೂರು: ಶಾಸಕರು, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ರವರಿಗೆ ಮೈಸೂರು ದಸರಾ ವಸ್ತುಪ್ರದರ್ಶನ ಸಾಂಸ್ಕೃತಿಕ ಸಮಿತಿ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪಿ. ಕಾಳಿಂಗರಾವ್ ಗಾನ ಮಂಟಪದಲ್ಲಿ ಸೋಮವಾರ ಭಾವಪೂರ್ಣ ಸಂತಾಪ ಸೂಚಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ದಸರಾ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಕಾಶ್. ಎಸ್, ಉಪಾಧ್ಯಕ್ಷರುಗಳಾದ ರಂಗಸ್ವಾಮಿ ಪಾಪು, ರಾಜೇಶ್ ಸಿ ಗೌಡ, ಶಿವಲಿಂಗಯ್ಯ, ರೇಷ್ಮಾ, ನಾಸೀರ್ ಖಾನ್, ನಿರೂಪಕ ಅಜಯ್ ಶಾಸ್ತ್ರಿ, ಶುಭಪಲ್ಲವಿ, ಗುರುರಾಜ್, ಸದಸ್ಯರುಗಳಾದ ಶ್ರೀಕಾಂತ, ಮೊಹಮ್ಮದ್ ಸಿದ್ದಿಖ್, ಚಿಕ್ಕಣ್ಣ ಶಿವರುದ್ರ, ರಾಜಶೇಖರ್ ಕಾರ್ತಿಕ್ ಲೋಕೇಶ್ ಮತ್ತಿತರರು ಹಾಜರಿದ್ದರು
ಶಾಮನೂರು ಶಿವಶಂಕರಪ್ಪ ಅವರಿಗೆದಸರಾ ವಸ್ತುಪ್ರದರ್ಶನದಲ್ಲಿ ಶ್ರದ್ದಾಂಜಲಿ