ಮೈಸೂರು: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಅವಧೂತ ದತ್ತ ಪೀಠದಲ್ಲಿ 2025ರ ಸಾಲಿನ ‘ಶ್ರೀ ದತ್ತಾತ್ರೇಯ ಜಯಂತಿ ಮಹೋತ್ಸವ’ವು ನವೆಂಬರ್ 30 ರಿಂದ ಡಿಸೆಂಬರ್ 8 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಪೂಜ್ಯ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿವೆ:
ನವೆಂಬರ್ 30, ಭಾನುವಾರ:
ಬೆಳಿಗ್ಗೆ 10 ಗಂಟೆಗೆ ಅಖಿಲ ಭಾರತ ಜ್ಞಾನ ಬೋಧ ಸಭಾ ಸಮ್ಮೇಳನ ನಡೆಯಲಿದೆ.
ಡಿಸೆಂಬರ್ 1, ಸೋಮವಾರ (ಶ್ರೀ ಗೀತಾ ಜಯಂತಿ):
ಬೆಳಿಗ್ಗೆ 10 ಗಂಟೆಗೆ ನಾದ ಮಂಟಪದಲ್ಲಿ ಸಂಪೂರ್ಣ ಭಗವದ್ಗೀತಾ ಪಾರಾಯಣ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಭಗವದ್ಗೀತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕ ವಿತರಣಾ ಸಮಾರಂಭ ನಡೆಯಲಿದೆ.
ಡಿಸೆಂಬರ್ 2, ಮಂಗಳವಾರ:
ಬೆಳಿಗ್ಗೆ 9 ಗಂಟೆಗೆ ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ಮಂಟಪೋತ್ಸವ ಹಾಗೂ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10ಕ್ಕೆ ಶ್ರೀ ಚಕ್ರ ಪೂಜೆ ಹಾಗೂ ದತ್ತಾತ್ರೇಯ ಹೋಮದ ಪೂರ್ಣಾಹುತಿ ನೆರವೇರಲಿದೆ. ಸಂಜೆ 6 ಗಂಟೆಗೆ ನಾದ ಮಂಟಪದಲ್ಲಿ ದಿವ್ಯ ನಾಮ ಸಂಕೀರ್ತನೆ ಇರಲಿದೆ.
ಡಿಸೆಂಬರ್ 3, ಬುಧವಾರ (ಶ್ರೀ ಹನುಮಾನ್ ಜಯಂತಿ):
ಬೆಳಿಗ್ಗೆ 7 ಗಂಟೆಗೆ ಕಾರ್ಯ ಸಿದ್ಧಿ ಹನುಮಾನ್ ಸ್ವಾಮಿಗೆ 13ನೇ ವಾರ್ಷಿಕ ಅಭಿಷೇಕ, ಬೆಳಿಗ್ಗೆ 11 ಗಂಟೆಗೆ ಹನುಮದ್ ವ್ರತ ಪೂಜೆ, ಸಂಜೆ 5 ಗಂಟೆಗೆ ರಥೋತ್ಸವ, ಸಂಜೆ 6 ಗಂಟೆಗೆ ಸನಾತನ ದತ್ತ ಬಂಧು ಮಹೋತ್ಸವ ಮತ್ತು ರಾತ್ರಿ 8 ಗಂಟೆಗೆ ಹನುಮಾನ್ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಜರುಗಲಿದೆ.
ಡಿಸೆಂಬರ್ 4, ಗುರುವಾರ (ಹುಣ್ಣಿಮೆ – ಶ್ರೀ ದತ್ತಾತ್ರೇಯ ಜಯಂತಿ):
ಅಂದು ಉತ್ಸವದ ಪ್ರಮುಖ ದಿನವಾಗಿದ್ದು, ಬೆಳಿಗ್ಗೆ 9 ಗಂಟೆಗೆ ಶ್ರೀ ಕಾಲಾಗ್ನಿ ಶಮನ ದತ್ತಾತ್ರೇಯ ಸ್ವಾಮಿಗೆ ತೈಲಾಭಿಷೇಕ, ಬೆಳಿಗ್ಗೆ 10 ಗಂಟೆಗೆ ಭಕ್ತಾದಿಗಳಿಂದ ಸಹಸ್ರ ಕಳಶ ತೈಲಾಭಿಷೇಕ ನೆರವೇರಲಿದೆ.
ಸಂಜೆ 6 ಗಂಟೆಗೆ ಸಪ್ತರ್ಷಿ ಸರೋವರದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಯ ಪಲ್ಲಕ್ಕಿ ಉತ್ಸವ ಮತ್ತು ತೆಪ್ಪೋತ್ಸವ ನಡೆಯಲಿದ್ದು, ರಾತ್ರಿ 8 ಗಂಟೆಗೆ ಕಾಕಡಾರತಿ ಹಾಗೂ ಡೋಲೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ
ಡಿಸೆಂಬರ್ 5, ಶುಕ್ರವಾರ:
ಬೆಳಿಗ್ಗೆ 9 ಗಂಟೆಗೆ ಮಂತ್ರ ಉಪದೇಶ ಕಾರ್ಯಕ್ರಮವಿರುತ್ತದೆ.
ಡಿಸೆಂಬರ್ 6, ಶನಿವಾರ:
ಶ್ರೀ ರಾಜರಾಜೇಶ್ವರಿ ದೇವಾಲಯದ 2ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ.
ಡಿಸೆಂಬರ್ 6, 7 ಮತ್ತು 8 ರಂದು ವಾರ್ಷಿಕ ಶಾಸ್ತ್ರ ಸಭೆ ನಡೆಯಲಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.
