ಪ್ರತಿಭಟನೆಗೆ ಮುಂದಾದ ಬಿಜೆಪಿಗರ ಬಂಧನ; ಬಿಡುಗಡೆ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ವಿವಿದ ವಿಚಾರಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ಬಂದಿಸಿ ಬಿಡುಗಡೆಗೊಳಿಸಿದ್ದಾರೆ.

ಚಾಮರಾಜನಗರದ ಕೊಳದ ಬೀದಿ ಮಂಟೇಸ್ವಾಮಿ ದೇವಸ್ಥಾನ ಹಾಗೂ ಸ್ಟೇಡಿಯಂ ಪಕ್ಕ ಸಂಚಾರಿ ಠಾಣೆ ಮುಂಭಾಗ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ದಿಕ್ಕಾರದ ಘೋಷಣೆಗಳನ್ನ ಕೂಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಬಂದಿಸಿ ನಂತರ ಬಿಡುಗಡೆಗೊಳಿಸಿದ್ದಾರೆ‌.

ಬಿಜೆಪಿ ಕಾರ್ಯಕರ್ತರಾದ ಶಿವರಾಜ್,
ಸೂರ್ಯ ಕುಮಾರ್,ಸುಂದರ್ ರಾಜ್,
ಹೌಸಿಂಗ್ ಬೋರ್ಡ್ ರಾಜು, ಮಣಿ ಕಂಠ,
ರಾಜೇಂದ್ರ, ನಂಜುಂಡ ನಾಯಕ,ಭಾಸ್ಕರ್ ,
ಕುಶಣ್ಣ,ಬುಲೆಟ್ ಚಂದ್ರು, ಕೂಡ್ಲೂರು ಶ್ರೀಧರ್ ಮೂರ್ತಿ ಮತ್ತಿತರರು ಪ್ರತಿಭಟನೆಗೆ ಮುಂದಾಗಿದ್ದರು.