ನಂಜನಗೂಡಿನಲ್ಲಿ ಜೆಡಿಎಸ್ ಬೆಳ್ಳಿ ಹಬ್ಬದ ಸಂಭ್ರಮ

ಮೈಸೂರು: ಮೈಸೂರು ಜಿಲ್ಲೆ,
ನಂಜನಗೂಡು ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳದ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮವನ್ನು ಶುಕ್ರವಾರ ಸಡಗರದಿಂದ ಆಚರಿಸಲಾಯಿತು.

ಪಟ್ಟಣದ‌ ಆರ್ ಪಿ ರಸ್ತೆಯಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪ್ರಥಮ ಪೂಜೆಯನ್ನು ಸಲ್ಲಿಸಿ ಅಲ್ಲಿಂದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಹಣ್ಣು ಹಂಪಲ ಹಂಚಲಾಯಿತು.

ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಹೂವಿನ ಹಾರವನ್ನು ಹಾಕಿ ಗೌರವಿಸಲಾಯಿತು.
ನಂತರ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಜಾತ್ಯಾತೀತ ಜನತಾ ದಳದ ಅಧ್ಯಕ್ಷ ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್.ವಿ. ಮಹದೇವಸ್ವಾಮಿ, ಯಡಿಯಾಲದ ಸತೀಶ್,ಹಳೇಪುರದ ರಾಜಶೇಖರ್,ದೀಪಕ್, ಆನಂದ್, ಮಹದೇವ್ ಗೌಡರು, ಮಾಜಿ ಪುರಸಭೆ ಸದಸ್ಯರಾದ ಮಹದೇವಯ್ಯ ಅಲಿದ್ ಖಾನ್, ನಂಜಪ್ಪ, ರಾಜೇಶ್, ಪ್ರಕಾಶ್,ರಜತ್,ಕಸುವಿನಹಳ್ಳಿ ಶಿವಕುಮಾರ್ , ಕೃಷ್ಣಾರವರು,ಶೇಷಣ್ಣ ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.