ಧಾರವಾಡ: ಧಾರವಾಡದ ರೈಲ್ವೇ ಕಾಲೋನಿ ಆವರಣದಲ್ಲಿ ನೈರುತ್ಯ ರೈಲ್ವೇ ಕನ್ನಡ ಸಂಘ ಧಾರವಾಡ ಶಾಖೆ ವತಿಯಿಂದ ಹಮ್ನಿಕೊಂಡಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.
ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೋ ಕೆ ಎಸ್ ಕೌಜಲಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಧಾರವಾಡ ರೈಲ್ವೇ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ವ್ಹಿ ಸಿ ಪಾಟೀಲ,ಕಚೇರಿ ಸೂಪರಿಂಟೆಂಡೆಂಟ್ ಮಂಜುನಾಥ ದ್ಯಾವಣ್ಣವರ ಹಾಗೂ ಪ್ರಕಾಶ ಬಾಗಳಿ ಪಾಲ್ಗೊಂಡಿದ್ದರು.
ಸಂಘದ ಅಧ್ಯಕ್ಷ ರಾ.ಹ ಕೊಂಡಕೇರ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷ ಮಹೇಶ ಎಸ್ ತಳವಾರ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುರೇಶ ಹೀರೆಣ್ಣವರ ಸವರು ಪ್ರಸ್ತಾವಿಕ ನುಡಿಗಳನ್ನಾಡಿದರು.
ಸಂಘದ ಸಂಘಟನಾ ಕಾರ್ಯದರ್ಶಿ ಸಂತೋಷ ಆಚಮಟ್ಟಿ ಕಾರ್ಯಕ್ರಮ ನಿರೂಪಿಸಿದರು.
ರೈಲ್ವೇ ಕಾಲೋನಿಯ ಮಕ್ಕಳು,ನೌಕರರು ಹಾಗೂ ಇನ್ನಿತರ ಕನ್ನಡ ಕಲಾಭಿಮಾನಿಗಳು ನೃತ್ಯ, ಹಾಡು,ಭಾಷಣ,ಏಕ ಪಾತ್ರಾಭಿನಯ,ಗೀತ ಗಾಯನ ನಡೆಸಿಕೊಟ್ಟು ಎಲ್ಲರನ್ನು ರಂಜಿಸಿದರು.
ಸಂಘದ ಎಲ್ಲಾ ಸದಸ್ಯರು,ಕನ್ನಡ ಪ್ರೇಮಿಗಳು,ರೈಲ್ವೇ ನೌಕರರು ಪಾಲ್ಗೊಂಡಿದ್ದರು.
