(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಪಟ್ಟಣದಲ್ಲಿ ಪ್ರತಿಷ್ಟಾಪಿಸಲಾದ ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥಸಂಚಲನ ನಡಸಿದರು.
ಚಾಮರಾಜನಗರ ಎಸ್ಪಿ ಬಿಟಿ ಕವಿತಾ ಅವರ ನೇತೃತ್ವದಲ್ಲಿ ಎಸ್ಪಿ, 5 ಡಿವೈಸ್ಪಿ,14ಪಿಐ, 36ಪಿಎಸ್ಐ, 58 ಎ ಎಸ್ಐ,362 ಪೇದೆ,ಮುಖ್ಯಪೇದೆ, 22 ಮಹಿಳಾ ಸಿಬ್ಬಂದಿ, 11 ವಿಡಿಯೋಗ್ರಾಪರ್, 200 ಗೃಹರಕ್ಷಕ ಸಿಬ್ಬಂದಿ, 5 ಕೆಎಸ್ಆರ್ ಪಿ ಪಾರ್ಟಿ,6 ಡಿಎಆರ್ ಸೇರಿದಂತೆ ಒಟ್ಟು 709 ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
ಗಣಪತಿ ವಿಸರ್ಜನಾ ಮಹೋತ್ಸದ ಮೆರವಣಿಗೆ ಬೀದಿಗಳಲ್ಲಿ ಎರಡು ಡ್ರೋನ್ ಬಳಸುವುದರ ಜೊತೆಗೆ ವಿವಿದೆಡೆ ಗಗನ ಪಹರೆಗಳನ್ನು ನಿಯೋಜಿಸಲಾಗಿದೆ.