ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡ ಪೊಲೀಸರಿಗೆ ಬಹಳಷ್ಟು ಮಂದಿ ಹ್ಯಟ್ಸಪ್ ಹೇಳಿದ್ದಾರೆ.
ಚೆನ್ನೈನ ಕರೂರಿನಲ್ಲಿ ನಟ,ರಾಜಕಾರಣಿ ವಿಜಯ್ ಚುನಾವಣಾ ಮೆರವಣಿಗೆ ವೇಳೆ ಸುಮಾರು ಲಕ್ಷ ಜನ ಸೇರಿದ್ದಕ್ಕೇನೆ ನೂಕು ನುಗ್ಗಲು,ಕಾಳ್ತುಳಿತವಾಗಿ 40 ಜನ ಮೃತಪಟ್ಟಿದ್ದಾರೆ.ಆದರೆ ವಿಶ್ವ ವಿಖ್ಯಾತ ಮೈಸೂರು ದಸರಾ ಚಾಮುಂಡೇಶ್ವರಿ ದೇವಿಯ ಜಂಬೂ ಸವಾರಿಯನ್ನು ನೋಡಲು ಲಕ್ಷಾಂತರಕ್ಕೂ ಹೆಚ್ಚು ಜನ ಸೇರಿದ್ದರೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡ ಪೋಲೀಸರು ಶ್ಲಾಘನೀಯರು ಎಂದು ನಗರದ ಜನತೆ ಮತ್ತು EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘ ಮೈಸೂರು ಪದಾಧಿಕಾರಿಗಳು ತಿಳಿಸಿದ್ದಾರೆ.
EPS95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸ್ವಾಮಿಶೆಟ್ಟಿ ಮತ್ತು ಪ್ರಧಾನ ಕಾರ್ಯ ದರ್ಶಿ ಮೋಹನ ಕೃಷ್ಣ ಅವರು
ದಸರಾ ಜಂಬುಸವಾರಿ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಲು ಶ್ರಮಿಸಿದ
ಸರ್ಕಾರ,ಮೈಸೂರು ಪೊಲೀಸರು,ನಗರ
ಆಯುಕ್ತರಾದ ಸೀಮಾಲಾಟ್ಕರ್ ಹಾಗೂ ಪೋಲಿಸ್ ಸೂಪರಿಟೆಂಡೆಂಟ್, ಇನ್ಸ್ಪೆಕ್ಟರ್ ಮತ್ತು ಶ್ರಮ ವಹಿಸಿದ ಎಲ್ಲ ಪೋಲಿಸರು, ಪೋಲಿಸ್ ಇಲಾಖೆಗೆ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು
ತಿಳಿಸಿದ್ದಾರೆ.