ಬಟ್ಟೆ ಬ್ಯಾಗನ್ನೇ ಬಳಕೆ ಮಾಡಿ: ಅರಿವು ಕಾರ್ಯಕ್ರಮ

Spread the love

ಮೈಸೂರು: ಮೈಸೂರು ಅರಮನೆಯಲ್ಲಿ ಪ್ರವಾಸಿಗರಿಗೆ ಬಟ್ಟೆ ಬ್ಯಾಗ್ ವಿತರಣೆ ಮಾಡುವ ಮೂಲಕ ಏಕ ಬಳಕೆ ಪ್ಲಾಸ್ಟಿಕ್ ಉಪಯೋಗಿಸದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಮಂಗಳವಾರ ಬೆಳಿಗ್ಗೆ‌ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸ್ವಚ್ಛತೆ ಮತ್ತು ವ್ಯವಸ್ಥೆ ಉಪಸಮಿತಿಯ ಅಧ್ಯಕ್ಷರಾದ ಸುಭಾನ್, ಉಪಾಧ್ಯಕ್ಷರಾದ ವಸಂತ್ ಕುಮಾರ್ ಮತ್ತು ಸದಸ್ಯರಾದ ಮೊಹಮ್ಮದ್ ಶರೀಫ್, ದಿನೇಶ್, ರಾಘವಾಚಾರಿ, ರಾಮಚಂದ್ರ, ಮಲ್ಲಜ್ಜಮ್ಮ, ಕಲ್ಪನಾ, ಸುಬ್ರಮಣ್ಯ, ಮಹೇಶ್ ಗೌಡ, ಮರಿಯಪ್ಪ, ಸಾಗರ್, ಯೋಗೇಶ್, ಮಲ್ಲೇಶ್,ರವಿಚಂದ್ರ, ಮಹದೇವ್, ತಮ್ಮಯ್ಯ, ಜಾವಿದ್ ಪಾಷಾ ಮತ್ತು ಪರಿಸರ ಅಭಿಯಂತರರಾದ ಲೋಕೇಶ್ವರಿ, ಜ್ಯೋತಿ, ಆರೋಗ್ಯ ಪರಿವೀಕ್ಷಕರಾದ ಶಿವಪ್ರಸಾದ್, ಶೋಭಾ ಹಾಗೂ ಸಿಬ್ಬಂದಿ ವರ್ಗದವರು ಬಟ್ಟೆ ಬ್ಯಾಗ್ ಬಳಕೆ ಮಾಡುವಂತೆ ಜನರಲ್ಲಿ ಹಾಗೂ ಪ್ರವಾಸಿಗರಲ್ಲಿ ಮನವಿ ಮಾಡಿದರು.