ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ತೆರವು:ವಸಿಷ್ಠ ಸಿಂಹ ಬೇಸರ

Spread the love

ಮೈಸೂರು: ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ತೆರವು ಗೊಳಿಸಿರುವುದಕ್ಕೆ ಖ್ಯಾತ ನಟ ವಸಿಷ್ಠ ಸಿಂಹ ತೀವ್ರ ದುಖಃ ವ್ಯಕ್ತ ಪಡಿಸಿದ್ದಾರೆ.

ವಿಷಯ ಗೊತ್ತಾಗುತ್ತಿದಂತೆ ಅನಾರೋಗ್ಯದ ಕಾರಣ ಆಡಿಯೋ ಒಂದನ್ನು ಬಿಡುಗಡೆ ಮಾಡಿರುವ ಅವರು,ರಾತೊರಾತ್ರಿ ಸದ್ದಿಲ್ಲದೆ ಮೇರು ನಟನ ಸಮಾಧಿಯನ್ನು ಧ್ವಂಸಗೊಳಿಸಿರುವುದು ಅತ್ಯಂತ ಅಸಹ್ಯಕರ ಮತ್ತು ಹೇಯ ಕೃತ್ಯ ಎಂದು ಕಿಡಿ ಕಾರಿದ್ದಾರೆ.

ಬಹಳ ವರ್ಷಗಳಿಂದ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ವಿಷ್ಣು ಸರ್ ಅವರ ಸ್ಮಾರಕ ಮಾಡಬೇಕೆಂದು ಅಭಿಮಾನಿಗಳು ಹಾಗೂ ಸಾವಿರಾರು ಮಂದಿ ಹೋರಾಟ ಮಾಡುತ್ತಾ ಬಂದಿದ್ದಾರೆ ಆದರೆ ತಾರ್ಕಿಕ ಅಂತ್ಯ ಕಾಣದೆ ಆ ಪುಣ್ಯ ಸ್ಥಳ ಇಂದು ಕಣ್ಮರೆಯಾಗಿದೆ ಎಂದು ನೊಂದು ನುಡಿದಿದ್ದಾರೆ.

ಇಂತಹ ಮೇರು ನಟನನ್ನು ಸಮಾಧಿ ರೂಪದಲ್ಲಿ ಕಣ್ತುಂಬಿಕೊಳ್ಳಲು ನೂರಾರು ಮಂದಿ ಅಭಿಮಾನ್ ಸ್ಟುಡಿಯೋಗೆ ಭೇಟಿ ಕೊಟ್ಟು ನಮಸ್ಕಾರ ಹಾಕಿ ಬರುತ್ತಿದ್ದರು. ಅವರನ್ನು ಆರಾಧಿಸುವವರು, ಬೇಕಾದವರು ಅಭಿಮಾನಿಗಳು ಅಲ್ಲಿಗೆ ಭೇಟಿ ನೀಡುತ್ತಿದ್ದರು. ಇಂದಲ್ಲ ನಾಳೆ ಸ್ಮಾರಕ ಆಗುತ್ತೆ ಎಂದು ನಾನು ಸೇರಿದಂತೆ ಅಭಿಮಾನಿಗಳು ಎದುರು ನೋಡುತ್ತಿದ್ದೆವು ಆದರೆ ಮೊನ್ನೆ ರಾತ್ರಿ ಸದ್ದಿಲ್ಲದೆ ಸಮಾಧಿ ಇತ್ತು ಎಂಬುದನ್ನೇ ಮರೆಮಾಚನಂತೆ ನೆಲಸಮ ಮಾಡಿದ್ದಾರೆ ಇದನ್ನು ಒಳ್ಳೆಯ ಮಾತಲ್ಲಿ ಹೇಳಲು ಆಗುತ್ತಿಲ್ಲ ಇದು ಅತ್ಯಂತ ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂತಹ ಸಾಧಕ, ಮೇರು ನಟ ಸಹೃದಯ ವ್ಯಕ್ತಿಗೆ ಈ ರೀತಿ ಅಪವನ ಮಾನ ಮಾಡಿರುವುದು ಇಡೀ ಕರ್ನಾಟಕದ ಜನತೆಗೆ ಒಂದು ಕಪ್ಪು ಚುಕ್ಕೆಯಾಗಿದೆ, ಸಮಾಧಿ ಸ್ಥಳದಲ್ಲಿ ಒಂದು ಸಣ್ಣ ಸೌಕರ್ಯ ಮಾಡಿಕೊಡಲು ಆಗದಂತ ಪರಿಸ್ಥಿತಿಗೆ ಹೋಗಿದ್ದಾರಾ ನಮ್ಮನ್ನು ಆಳುವವರು ಅವರು ಇದನ್ನೆಲ್ಲ ಕೈ ಬಿಟ್ಟುಬಿಟ್ಟರಾ, ಹಾಗಾದರೆ ಮೇರು ನಟನ ಸಾಧನೆಗೆ ಬೆಲೆಯೇ ಇಲ್ಲವೇ ಎಂದು ದುಖಿಃಸಿದರು.

ನಿಜಕ್ಕೂ ಇದು ಹೀಗೆ ಆಗಬಾರದಿತ್ತು ವಿಷಯ ತಿಳಿದು ನನಗೆ ಬಹಳ, ಬಹಳ ಬೇಸರ ಆಯ್ತು ಇದರ ಹಿಂದೆ ಯಾರೇ ಇದ್ದರು ಅವರನ್ನು ದೇವರು ಚೆನ್ನಾಗಿ ಇಟ್ಟಿರಲಿ ಎಂದು ದುಃಖದಿಂದ ವಶಿಷ್ಟ ಸಿಂಹ ಹೇಳಿದರು.

ಇದಕ್ಕೆ ನಾವು ಸೂಕ್ತವಾದ ಪರಿಹಾರ ಕಂಡುಕೊಳ್ಳಲೇ ಬೇಕಿದೆ ಎಂದು ಹೇಳಿದ ಅವರ ಇದು ಎಂದಿಗೂ ಕಳಿಸಲಾಗದ ನೋವು ಆದರ್ಶಕ್ಕೆ ಬೆಲೆ ಇಲ್ಲದಂತಾಗಿಬಿಟ್ಟಿದೆ ಎಂದು ನುಡಿದಿದ್ದಾರೆ.