ಅರವಿಂದ್ ಬೆಲ್ಲದ್ ಹುಟ್ಟು ಹಬ್ಬ: ಸಾಮಾಜಿಕ ಸೇವಾಕಾರ್ಯ

Spread the love

ಮೈಸೂರು: ಬಿಜೆಪಿ ಮುಖಂಡ ಜಿ ಎಂ ಪಂಚಾಕ್ಷರಿ ಅವರ ನೇತೃತ್ವದಲ್ಲಿ
ಚಾಮುಂಡಿ ಬೆಟ್ಟದಲ್ಲಿ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ನಗರದ ಕೃಷ್ಣಮೂರ್ತಿಪುರಂ
ಶಾರದಾ ನೆಲೆ ಉಚಿತ ವಿದ್ಯಾರ್ಥಿನಿಲಯದ ಮಕ್ಕಳ ಜೊತೆ ಕೇಕ್ ಕಟ್ ಮಾಡಿ
ಮಕ್ಕಳಿಗೆ ಭೋಜನದ ವ್ಯವಸ್ಥೆ ಮಾಡುವ ಮೂಲಕ ಅರವಿಂದ್ ಬೆಲ್ಲದ್ ಅವರ ಜನುಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜಿ.ಎಂ ಪಂಚಾಕ್ಷರಿ ಅವರು,ಆರ್ ಎಸ್ ಎಸ್ ಮೂಲ ದಿಂದ ಗುರುತಿಸಿಕೊಂಡು ಕ್ಷೇತ್ರದ ಹ್ಯಾಟ್ರಿಕ್ ಶಾಸಕ ಎಂದೆ ಹೆಸರು ಮಾಡಿರುವ
ಅರವಿಂದ್ ಬೆಲ್ಲದ್ ಅವರಿಗೆ
ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನ ಸಿಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ ಪಾರ್ಥಸಾರಥಿ ,ಸುಚೇಂದ್ರ
ಮತ್ತಿತರರು ಹಾಜರಿದ್ದರು.