2 ದಶಕದ ನಂತರ ಪಾಳ್ಯ-ಉಗನಿ ರಸ್ತೆಗೆ ಅಭಿವೃದ್ಧಿ ಭಾಗ್ಯ; ಮಂಜುನಾಥ್ ಚಾಲನೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕಳೆದ ಎರಡು ದಶಕಗಳಿಂದ ದುರಸ್ತಿ ಕಾಣದೆ ಹಾಳಾಗಿದ್ದ ತಾಲ್ಲೂಕಿನ ಪಾಳ್ಯ-ಉಗನಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಹನೂರು ಶಾಸಕ ಎಂ. ಆರ್. ಮಂಜುನಾಥ್ ಅವರು ಚಾಲನೆ ನೀಡಿದರು.

ಸುಮಾರು 5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಈ ಪಾಳ್ಯ-ಉಗನಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಗುದ್ದಲಿಪೂಜೆ ಮಾಡಲಾಗಿದೆ. ಈ ಕಾಮಗಾರಿಯ ಗುಣಮಟ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಪಾಡಿ ಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ನಾನು ಕಳೆದ ಎರಡೂವರೆ ವರ್ಷಗಳ ಹಿಂದೆ ಚುನಾವಣೆ ಸಂದರ್ಭದಲ್ಲಿ ಈ ಪಾಳ್ಯ ಮತ್ತು ಉಗನಿಯ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಸಣ್ಣ ಸಣ್ಣ ಮಕ್ಕಳು ಈ ರಸ್ತೆ ತುಂಬಾ ಹಾಳಾಗಿದೆ ಅದಕ್ಕೆ ಬಸ್ಸು, ಆಟೋಗಳು ರಸ್ತೆಯಲ್ಲಿ ಬರಲು ಒಪ್ಪುತ್ತಿಲ್ಲ, ನಮಗೆ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ನಿತ್ಯ ತೊಂದರೆಯಾಗುತ್ತಿದೆ ಎಂದು ಅಳಲು ತೋ ಡಿಕೊಂಡಿದ್ದರು,ಜತೆಗೆ ಸತ್ತೇಗಾಲ ತನಕ ರಸ್ತೆ ತೀರಾ ಹದಗೆಟ್ಟು ಈ ಮಾರ್ಗದಲ್ಲಿ ಜನರು ಓಡಾಡುವುದಕ್ಕೆ ತುಂಬಾ ಕಷ್ಟಕರವಾಗಿತ್ತು ಇದರ ಮಧ್ಯ ಮಳೆ ಬಂದರೆ ಹೆಚ್ಚಿನ ಅಪಘಾತಗಳು ಆಗುತ್ತಿತ್ತು ಇದನ್ನೆಲ್ಲ ನೋಡಿದ ಗ್ರಾಮದ ಜನರು ದಿನ ಬೆಳೆಗಾದರೆ ನನ್ನ ಬಳಿ ಬಂದು ಅಳಲು ತೋಡಿ ಕೊಳ್ಳುತ್ತಿದ್ದರು ಅದಕ್ಕೆ ಸ್ಪಂದಿಸಿದ್ದೇನೆ ಎಂದು ತಿಳಿಸಿದರು.

ಕೂಡಲೆ ಈ ರಸ್ತೆ ಅಭಿವೃದ್ದಿ ಆಗಲೇಬೇಕೆಂದು ನನಗೆ ತುಂಬಾ ಚಿಂತೆ ಕಾಡುತ್ತಿತ್ತು ಹಾಗಾಗಿ ಈ ರಸ್ತೆ ಅಭಿವೃದ್ಧಿಗೆ ಈಗ ಕಾಲ ಕೂಡಿ ಬಂದಿದೆ ಅದಕ್ಕೆ ಗ್ರಾಮಸ್ಥರು ತಾವೇ ನಿಂತು ಈ ರಸ್ತೆ ಅಭಿವೃದ್ಧಿ ಮಾಡಿಸಿಕೊಳ್ಳಿ ಎಂದು ಕರೆ ನೀಡಿದರು.

ನಾನು ಇಡಿ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿ ಮಾಡಬೇಕೆಂದು ಸರ್ಕಾರಕ್ಕೆ 254 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದೆ. ಆದರೆ ಸರ್ಕಾರ 50 ಕೋಟಿ ಅಭಿವೃದ್ಧಿಗಾಗಿ ನೀಡಿದೆ, ಹಾಗಾಗಿ ಮುಂದಿನ ದಿನಗಳಲ್ಲಿ ಆ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿ ಕೊಳ್ಳುವುದಾಗಿಯೂ ಮುಂದಿನ ದಿನಗಳಲ್ಲಿ ಉಗನಿಯ-ಸತ್ತೇಗಾಲ ರಸ್ತೆ ಅಭಿವೃದ್ಧಿ ಮಾಡುವುದಾಗಿ ಶಾಸಕರು
ಭರವಸೆ ನೀಡಿರು.

ಉಗನಿ ಗ್ರಾಮದ ಮುಖಂಡ ಹಾಗೂ ಮಾಜಿ ಗ್ರಾ.ಪಂ.ಅಧ್ಯಕ್ಷ ಮೂರ್ತಿ ಮಾತನಾಡಿ ಕಳೆದ 30 ವರ್ಷಗಳ ಹಿಂದೆ ನಾಗಪ್ಪ ಅವರ ಅವಧಿಯಲ್ಲಿ ಪಾಳ್ಯ-ಉಗನಿಯ ರಸ್ತೆ ಕಾಮಗಾರಿ ನಡೆದಿದ್ದು ಮತ್ತೆ ಇಲ್ಲಿವರೆಗೂ ಈ ರಸ್ತೆ ಅಭಿವೃದ್ಧಿ ಕಂಡಿಲ್ಲ ಎಂದು ಹೇಳಿದರು.

ಕಳೆದೆರಡು ದಶಕಗಳಿಂದ ದುರಸ್ತಿ ಕಾಣದೆ ತೀರಾ ಹದಗೆಟ್ಟಿದ್ದು ಈ ರಸ್ತೆಯಲ್ಲಿ ರೈತರು, ಶಾಲೆಯ ಮಕ್ಕಳು ಹಾಗೂ ಗ್ರಾಮದ ಜನರು ಓಡಾಡಲು ತುಂಬಾ ತೊಂದರೆಯಾಗಿತ್ತು, ನಾನು ನಮ್ಮ ಗ್ರಾಮದವರು ಒಟ್ಟುಗೂಡಿ ಈ ಹಿಂದೆ ಕಳೆದ ಮೂರು ಬಾರಿ ಶಾಸಕರಾಗಿದ್ದ ಆರ್.ನರೇಂದ್ರ ಅವರಿಗೆ ಈ ರಸ್ತೆ ಅಭಿವೃದ್ಧಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದೆವು ಎಂದು ಹೇಳಿದರು.

ಆದರೆ ಒಂದು ಮೂರು ಅಡಿಯನ್ನು ರಸ್ತೆ ಅಭಿವೃದ್ಧಿಯನ್ನು ಮಾಡುವುದಕ್ಕೆ ಮಾಜಿ ಶಾಸಕರಾದ ನರೇಂದ್ರ ರವರ ಕೈಯಲ್ಲಿ ಸಾಧ್ಯವಾಗಲಿಲ್ಲ ಎಂದು ಮಾಧ್ಯಮದವರ ಮುಂದೆ ಆರೋಪ ಮಾಡಿದರು.

ಕೇವಲ ಎರಡು ವರ್ಷ ಮೂರು ತಿಂಗಳಲ್ಲಿ ಹಾಲಿ ಶಾಸಕ ಎಂ ಆರ್ ಮಂಜುನಾಥ್ ಅವರು ಸರ್ಕಾರದ ಗಮನಕ್ಕೆ ತಂದು ಹೋರಾಟ ಮಾಡಿ 5 ಕೋಟಿ ಅನುದಾನ ತಂದು ಪಾಳ್ಯ ಮಾರ್ಗದಿಂದ ಉಗನಿಯ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಮಾಡಿಸಲು ಇಂದು ಗುದ್ದಲಿ ಪೂಜೆ ನೆರವೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಉಗನಿ ಗ್ರಾಮದಿಂದ ಸತ್ತೇಗಾಲವರೆಗೆ ರಸ್ತೆ ಅಭಿವೃದ್ಧಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಎರಡು ವರ್ಷ ಮೂರು ತಿಂಗಳು ಅವಧಿಯಲ್ಲಿ 200 ಕ್ಕೂ ಹೆಚ್ಚು ಕೋಟಿ ಅನುದಾನ ತಂದು ಕ್ಷೇತ್ರದ ಬಹಳಷ್ಟು ಗ್ರಾಮಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿದ್ದಾರೆ ಇಂತಹ ಶಾಸಕರು ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಶ್ಲಾಘಿಸಿದರು.

ಈ ಸಂಧರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಸುರೇಂದ್ರ, ಪಾಳ್ಯ ಗ್ರಾಮ ಪಂಚಾಯತಿ ಸದಸ್ಯರಾದ ರವಿ, ಕಮಲಾಪುರ ರಾಜು, ಮುಖಂಡರಾದ ಗೋಪಾಲನಾಯಕ, ದೊಡ್ಡ ಸಿಗನಾಯಕ,ದೊಡ್ಡರಾಜು, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಬಸವರಾಜು,ಉಗನಿಯ ಮೂರ್ತಿ, ಶಿವಮಾದಯ್ಯ, ರಘು, ಸಿಂಗನಲ್ಲೂರು ರಾಜಣ್ಣ, ಎಸ್.ಆರ್ ಮಹದೇವ್, ಹನೂರು ಗೋವಿಂದ, ಅಮೀನ್, ವೆಂಕಟೇಶ್, ಹನೂರು ಮಂಜೇಶ್ ಮತ್ತಿತರರು ಹಾಜರಿದ್ದರು.