ಬೈಕ್ ಗೆ ಬಸ್ ಡಿಕ್ಕಿ ವ್ಯಕ್ತಿ ಸಾವು

Spread the love

ಬೆಳಗಾವಿ: ರಾಜ್ಯ ಸಾರಿಗೆ ಬಸ್‌ ಹಾಗೂ ಬೈಕ್ ಮುಖಾ-ಮುಖಿ ಡಿಕ್ಕಿಯಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಅಥಣಿ ತಾಲೋಕಿನಲ್ಲಿ ನಡೆದಿದೆ‌

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಬಳ್ಳಿಗೇರಿ ಮಲಾಬಾದ ಸಮೀಪ ಬೆವಣೂರು ಕ್ರಾಸ್ ಬಳಿ ಈ ಘಟಬೆ ನಡೆದಿದೆ. ಮಲಬಾದ್ ಮೂಲದ ನೂ‌ರ್ ಸಿರಾಜ್ ಮುಲ್ಲಾ (45) ಮೃತಪಟ್ಟ‌ ವ್ಯಕ್ತಿ.

ಅಥಣಿ ಮಾರ್ಗವಾಗಿ ಬರುತ್ತಿದ್ದ ಸಾರಿಗೆ ಬಸ್‌ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.