ಕೋಲ್ಕತ್ತಾ: ವ್ಯಕ್ತಿಯೊಬ್ಬ ತನ್ನ ಅತ್ತಿಗೆಯನ್ನೇ ಕೊಚ್ಚಿ ಕೊಂದು ರುಂಡವನ್ನು ಹಿಡಿದು ಬೀದಿಗಳಲ್ಲಿ ಸುತ್ತುತ್ತಾ ಆತಂಕ ಸೃಷ್ಟಿಸಿದ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಸಂತ್ನಲ್ಲಿ ನಡೆದಿದೆ.
ಬಿಮಲ್ ಮಂಡಲ್ ಅತ್ತಿಗೆಯನ್ನೇ ಕೊಂದ ಪಾಪಿ ಮೈದುನ, ಸತಿ ಮಂಡಲ್ ಕೊಲೆಯಾದ ಅತ್ತಿಗೆ. ಕೌಟುಂಬಿಕ ಕಲಹ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಸತಿ ಮಂಡಲ್ ಮತ್ತು ಬಿಮಲ್ ಮಂಡಲ್ ನಡುವೆ ಕೆಲವು ಸಮಯದಿಂದ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಜಗಳ ನಡೆದಿತ್ತು.ಜತೆಗೆ ಕೊಲೆ ಮಾಡುವುದಾಗಿಯೂ ಹಲವು ಬಾರಿ ಸಾರ್ವಜನಿಕವಾಗಿಯೇ ಬೆದರಿಕೆ ಹಾಕಿದ್ದನಂತೆ.
ಹರಿತವಾದ ಆಯುಧದಿಂದ ಆಕೆಯ ತಲೆಯನ್ನು ಕತ್ತರಿಸಿ ರಕ್ತಸಿಕ್ತ ರುಂಡ ಮತ್ತು ರಕ್ತಸಿಕ್ತ ಚಾಕುವಿನಿಂದ ಸ್ವಲ್ಪ ಸಮಯದವರೆಗೆ ರಸ್ತೆಯಲ್ಲಿ ಓಡಾಡುತ್ತಾ, ತನಗೆ ಆಗಿರುವ ಅನ್ಯಾಯಕ್ಕೆ ಸೇಡು ತೀರಿಸಿಕೊಂಡಿದ್ದೇನೆ ಎಂದು ಕೂಗುತ್ತಾ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದ್ದ.
ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಸ್ವಲ್ಪ ಸಮಯದ ನಂತರ, ಬಿಮಲ್ ಪೊಲೀಸ್ ಠಾಣೆ ರುಂಡ ಮತ್ತು ಚಾಕುವಿನೊಂದಿಗೆ ಬಂದು ಶರಣಾಗಿದ್ದಾನೆ. ಪೊಲೀಸರೂ ಕೂಡಾ ಅವನನ್ನು ನೋಡಿ ಶಾಕ್ ಆಗಿದ್ದಾರೆ.