50 ಜನ ಗಣ್ಯರು, ಸಾಧಕರು,ಪ್ರತಿಭಾನ್ವಿತರಿಗೆ ಯುಗಾದಿ ಪುರಸ್ಕಾರ

Spread the love

ಬೆಂಗಳೂರು: ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಆಸ್ಕರ್ ಕೃಷ್ಣ ಸಾರಥ್ಯದ ಕಲಾಭೂಮಿ ಪ್ರತಿಷ್ಠಾನ ವತಿಯಿಂದ‌ ಆಯೋಜಿಸಿದ್ದ ಕಲಾಭೂಮಿ ಯುಗಾದಿ ಪುರಸ್ಕಾರ-2025 ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ದೇಶದ ವಿವಿಧ ಭಾಗದ 50 ಜನ ಗಣ್ಯರು, ಸಾಧಕರು,ಪ್ರತಿಭಾನ್ವಿತರಿಗೆ ಯುಗಾದಿ ಪುರಸ್ಕಾರ ವನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆಸ್ಕರ್ ಕೃಷ್ಣ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.