ಹುಬ್ಬಳ್ಳಿ: ಹಿರಿಯ ಸಾಹಿತಿಗಳಾದ ಪ್ರೊ. ಕೆ ಎಸ್ ಕೌಜಲಗಿ ಅವರು ಮಾರ್ಚ್ ೨೦ ರಂದು ನಡೆಯುವ ಹುಬ್ಬಳ್ಳಿ ಶಹರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.
ಪ್ರೊ. ಕೆ ಎಸ್ ಕೌಜಲಗಿ ಅವರು
ಕನ್ನಡ ಜಾನಪದ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳೂ, ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳೂ ಆಗಿದ್ದಾರೆ.
ಪ್ರೊ. ಕೆ ಎಸ್ ಕೌಜಲಗಿ ಗುರುಗಳು ಹುಬ್ಬಳ್ಳಿ ಶಹರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜಾನಪದ ಯುವ ಬ್ರಿಗೇಡ್ ಧಾರವಾಡ ಘಟಕದ ವತಿಯಿಂದ ಸನ್ಮಾನಿಸಿ,ಅಭಿನಂದಿಸಲಾಯಿತು.
ಜಿಲ್ಲಾ ಸಂಚಾಲಕರಾದ ಮಹೇಶ ಎಸ್ ತಳವಾರ ಹಾಗೂ ಸಹ ಸಂಚಾಲಕರಾದ ರಾಮಪ್ಪ ಹ ಕೊಂಡಕೇರ ಅವರು ಪ್ರೊ. ಕೆ ಎಸ್ ಕೌಜಲಗಿ ಅವರನ್ನು ಅಭಿನಂದಿಸಿ,ಸತ್ಕರಿಸಿದರು.