ಮಂಡ್ಯ: ಮಂಡ್ಯಾದ ಸ್ಪಂದನ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಯಿತು.
ಶುಕ್ರವಾರ ಸಂಜೆ ಮಂಡ್ಯಾದ ಪಾಂಡುರಂಗ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸ್ಪಂದನ ಇಂಟರ್ನ್ಯಾಷನಲ್ ಶಾಲೆ ವಾರ್ಷಿಕೋತ್ಸವನ್ನು ದೀಪ ಬೆಳಗುವ ಮೂಲಕ ಕನ್ನಡ ಜಾನಪದ ಪರಿಷತ್ ರಾಜ್ಯದ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ಉದ್ಘಾಟನೆ ಮಾಡಿದರು.

ಸ್ವರ್ಣ ನ್ಯೂಸ್ ಚಾನೆಲ್ ಸಿ ಇ ಒ ಶಂಭು, ಸಂಸ್ಥೆಯ ಸಂಸ್ಥಾಪಕ ವಿಜಯ್ ಕೊಪ್ಪ, ಮೈಸೂರು ಯುವರಾಜಾ ಕಾಲೇಜಿನ ಶ್ರೀ ವೆಂಕಟೇಶ್, ಕನ್ನಡ ಜಾನಪದ ಪರಿಷತ್ ರಾಮನಗರ ಜಿಲ್ಲಾ ಅಧ್ಯಕ್ಷ ಕೆ ಸಿ ಕಾಂತಪ್ಪ, ಮತ್ತಿತರೆ ಗಣ್ಯರು ಪಾಲ್ಗೊಂಡಿದ್ದರು.

ಈ ವೇಳೆ ಪ್ರತಿಭಾನ್ವಿತ ಮಕ್ಕಳಿಗೆ ಸರ್ಟಿಫಿಕೆಟ್ ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.

ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
