ಮೈಸೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 18, 19ರಂದು ನಡೆಯಲಿರುವ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ಮೈಸೂರು ಜಿಲ್ಲೆಯಿಂದ ಸುಮಾರು 5000 ಮಂದಿಭಾಗವಹಿಸ
ಲಿದ್ದಾರೆ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಮಾ. ವಿ ರಾಮ್ ಪ್ರಸಾದ್ ಹೇಳಿದರು.

ನಗರದ ಕಾಳಿದಾಸ ರಸ್ತೆಯಲ್ಲಿರುವ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಅರ್ಚಕರು ಹಾಗೂ ಪುರೋಹಿತರಿಗೆ ಸಮಾವೇಶದ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬುದ್ದಿವಂತ, ವಿದ್ಯಾವಂತ ಸಮಾಜ ಎಂದು ಗುರುತಿಸಿಕೊಂಡಿದ್ದರೂ ಸಾಕಷ್ಟು ಸಂಕಷ್ಟಗಳು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಶಿಕ್ಷಣದಲ್ಲಿ ಉನ್ನತ ವ್ಯಾಸಂಗ ಪಡೆಯಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಮತ್ತು ಸಮರ್ಪಕ ಉದ್ಯೋಗ ಸಿಗುತ್ತಿಲ್ಲ ಹಾಗೂ ಅರ್ಚಕರು, ಅಡುಗೆ ಕೆಲಸ ಮಾಡುವವರ ಸ್ಥಿತಿ ಶೋಚನಿಯವಾಗಿದೆ,ಹಾಗಾಗಿ ಬ್ರಾಹ್ಮಣರು ಸಂಘಟಿತರಾಗಬೇಕು, ನಮ್ಮ ಹಕ್ಕು ಹೋರಾಟಗಳಿಗೆ ನಾವೆಲ್ಲರು ಒಂದೇ ಎಂದು ಮುಂದೆ ಸಾಗಬೇಕು ಆಗ ಮಾತ್ರ ಬ್ರಾಹ್ಮಣ ಸಮುದಾಯ ಅಭಿವೃದ್ಧಿ ಸಾಧ್ಯ ಎಂದು ರಾಮಪ್ರಸಾದ್ ತಿಳಿಸಿದರು.

ಈ ವೇಳೆ ಯೋಗ ನರಸಿಂಹ (ಮುರಳಿ), ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ ಪಾರ್ಥಸಾರಥಿ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಮಿರ್ಲೆ ಪನಿಷ್, ಸುಚಿಂದ್ರ, ದೇವಸ್ಥಾನದ ಪ್ರದನ ಅರ್ಚಕರದ ವಿಜಯ ರಾಘವನ್, ರಾಘವ, ಸುಬ್ಬಣ್ಣ, ಸೂರ್ಯನಾರಾಯಣ ಭಟ್, ಕಣ್ಣನ್, ಪ್ರಸನ್ನ, ಆನಂದ್, ಹಾಗೂ ವಿಪ್ರ ಮಹಿಳಾ ಸಂಘಟಕರು ಹಾಜರಿದ್ದರು.