ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗೆ ಇಂದಿನಿಂದ ಎರಡು ದಿನಗಳ ಕಾಲ ಬೆಳಗಿನ ತಾಲೀಮು ನಿಲ್ಲಿಸಲಾಗಿದೆ.
ದಸರಾದಲ್ಲಿ ಅಂಬಾರಿ ಹೊರಲು ಸಜ್ಜಾಗುತ್ತಿರುವ ಅಭಿಮನ್ಯು ಪಡೆಗೆ ಎರಡು ದಿನಗಳ ಕಾಲ ಬೆಳಗಿನ ತಾಲೀಮಿಗೆ ಬ್ರೇಕ್ ಕೊಡಲಾಗಿದೆ.
ಪ್ರತಿದಿನ ಸುಮಾರು 12 ಕಿಮೀ ಸಾಗುತ್ತಿರುವ
ಆನೆಗಳಿಗೆ ಬೆಳಗಿನ ತಾಲೀಮಿಗೆ ವಿರಾಮ ನೀಡಲಾಗಿದೆ.ಆದರೆ ಸಂಜೆ ತಾಲೀಮು ಮುಂದುವರಿಯಲಿದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.
ಇಂದು ಸಂಜೆ 5.30 ಕ್ಕೆ ಅರಮನೆಯಿಂದ ಆಯುರ್ವೇದಿಕ್ ವೃತ್ತದವರೆಗೂ ಗಜಪಡೆ ಪೆರೇಡ್ ಸಾಗಲಿದೆ.ಭಾನುವಾರ ಬೆಳಗಿನ ತಾಲೀಮು ತಪ್ಪಿಸಿ ಸಂಜೆ 4 ಗಂಟೆಗೆ ತಾಲೀಮು ಅರಮನೆಯಿಂದ ಬನ್ನಿಮಂಟಪದವರೆಗೂ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕಾಂಕ್ರೀಟ್ ರಸ್ತೆಯಲ್ಲಿ ಆನೆಗಳು ನಡೆಯುವುದರಿಂದ ಪಾದಗಳು ಸವೆದುಹೋಗುವ ಸಾಧ್ಯತೆಗಳು ಇರುವುದರಿಂದ ವೈದ್ಯರ ಸಲಹೆ ಮೇರೆಗೆ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಭುಗೌಡ ಹೇಳಿದ್ದಾರೆ.